Asianet Suvarna News Asianet Suvarna News

ಡಿಕೆಶಿ ವಿರುದ್ಧ ಸೇಡಿನ ಯುದ್ಧಕ್ಕೆ ಕಹಳೆಯೂದಿದ ದಳಪತಿ: ಮಗನ ಸೋಲಿಗೆ ಸೇಡು ತೀರಿಸಿಕೊಳ್ಳಲು ಎಚ್‌ಡಿಕೆ ಶಪಥ..!

ದಳಪತಿ ಸೇಡು, ಇದು 2019ರ ರಿವೇಂಜ್'ನ ರೋಚಕ ಕಥೆ. ಐದು ವರ್ಷಗಳ ಹಿಂದಿನ ಆ ಸೇಡು ತೀರಿಸಿಕೊಳ್ಳಲು ಕುಮಾರಸ್ವಾಮಿ ಹೆಣೆದಿರೋ ಸೇಡಿನ ವ್ಯೂಹ. ಆ ಸೇಡಿನ ಯುದ್ಧಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವೇ ಅಖಾಡ. ಕನಕಪುರ ಬಂಡೆ ವಿರುದ್ಧ ರೋಷ, ಡಿಕೆ ಸಹೋದರರ ವಿರುದ್ಧ ರೋಷಾವೇಶ
 

ಬೆಂಗಳೂರು(ಮಾ.20): ಡಿಕೆ ವಿರುದ್ಧ ಸೇಡಿನ ಯುದ್ಧಕ್ಕೆ ದಳಪತಿ ಕಹಳೆ ಊದಿದ್ದಾರೆ. ಹೌದು, ಮಗನ ಸೋಲಿಗೆ ಸೇಡು ತೀರಿಸಿಕೊಳ್ಳಲು ಕುಮಾರಸ್ವಾಮಿ ಹೊರಡಿದ್ದಾರಾ? “ನಮ್ಮನ್ನು ವಿಷ ಹಾಕಿ ಕೊಂದಿದ್ದೀರಿ..”ಎಂದಿದ್ದೇಕೆ ಎಚ್.ಡಿ.ಕೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ದಳಪತಿ ಸೇಡು, 2019ರ ರಿವೇಂಜ್.

ದಳಪತಿ ಸೇಡು, ಇದು 2019ರ ರಿವೇಂಜ್'ನ ರೋಚಕ ಕಥೆ. ಐದು ವರ್ಷಗಳ ಹಿಂದಿನ ಆ ಸೇಡು ತೀರಿಸಿಕೊಳ್ಳಲು ಕುಮಾರಸ್ವಾಮಿ ಹೆಣೆದಿರೋ ಸೇಡಿನ ವ್ಯೂಹ. ಆ ಸೇಡಿನ ಯುದ್ಧಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವೇ ಅಖಾಡ. ಕನಕಪುರ ಬಂಡೆ ವಿರುದ್ಧ ರೋಷ, ಡಿಕೆ ಸಹೋದರರ ವಿರುದ್ಧ ರೋಷಾವೇಶ..!  

ಇಟ್ಟ ಗುರಿ ಮುಟ್ಟೋಕೆ ಹೇಗಿದೆ ಮೋದಿ ಪಡೆಯ ಸಿದ್ಧತೆ..? ಏನು ಗೊತ್ತಾ ಮೋದಿ ಮಿಷನ್ 2047 ರಹಸ್ಯ.?

ಸೇಡಿನ ಯುದ್ಧದಲ್ಲಿ ವಿಷದ ಮಾತು. ಇದು ಡಿ.ಕೆ.ಶಿವಕುಮಾರ್ ವಿರುದ್ಧ ದಳಪತಿಯ ಮತ್ತೊಂದು ಜಾರ್ಜ್'ಶೀಟ್. ಸ್ನೇಹದ ಮುಖವಾದ ಧರಿಸಿದ್ದವರು, ಎಚ್ಡಿಕೆಗೆ ರಾಜಕೀಯವಾಗಿ ವಿಷ ಹಾಕಿದ್ದಾರಂತೆ. ಏನಿದರ ಅಸಲಿಯತ್ತು..? ಮಂಡ್ಯದ ಸೋಲಿನ ಸೇಡನ್ನು ಬೆಂಗಳೂರು ಗ್ರಾಮಾಂತರದಲ್ಲಿ ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಇದೇ ದಳಪತಿಯ ಸೇಡಿನ ಕಥೆ. 

ಆ ಸೇಡಿನ ಯುದ್ಧದಲ್ಲಿ ವಿಷದ ಮಾತೂ ಮಾರ್ಧನಿಸ್ತಾ ಇದೆ. ಸ್ನೇಹದ ಮುಖವಾದ ಧರಿಸಿದ್ದವರು, ದಳಪತಿಗೆ ರಾಜಕೀಯವಾಗಿ ವಿಷ ಹಾಕಿದ್ದಾರಂತೆ. ಅಷ್ಟಕ್ಕೂ ಏನಿದು ಎಚ್ಡಿಕೆ ಮಾತಿನ ಮರ್ಮ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
ಇದು ಔಟ್ ಆ್ಯಂಡ್ ಔಟ್ ಸೇಡಿನ ಸಮರ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಸೇಡಿನ ಯುದ್ಧ. ಈ ಜಿದ್ದಾಜಿದ್ದಿಯಲ್ಲಿ ಕನಕಪುರ ಬಂಡೆಗೆ  ಖಡಕ್ ವಾರ್ನಿಂಗ್ ಕೊಟ್ಟದ್ದಾರೆ ದಳಪತಿ. ಇದನ್ನೆಲ್ಲಾ ಇಲ್ಲಿಗೇ ನಿಲ್ಲಿಸಿ ಅಂತ ಅಬ್ಬರಿಸಿದ್ದಾರೆ ಕುಮಾರಸ್ವಾಮಿ.