Asianet Suvarna News Asianet Suvarna News

ಮೋದಿಗೆ ಬೈದ ಆನಂದ್ ಸಿಂಗ್‌ಗೆ ಬಿಜೆಪಿ ಟಿಕೆಟ್; ಬಿಜೆಪಿ ಸಭೆಯಲ್ಲಿ ಬಿಗ್ ಫೈಟ್!

ಉಪಚುನಾವಣೆಗೆ ಇನ್ನಿಪ್ಪತ್ತು ದಿನ ಬಾಕಿ ಉಳಿದಿದೆ. ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಂತೆ ಬಂಡಾಯದ ಕೂಗೆದ್ದಿದೆ. ವಿಜಯನಗರದಲ್ಲಿ ಆನಂದ್ ಸಿಂಗ್‌ಗೆ ಟಿಕೆಟ್ ಕೊಟ್ಟಿರುವುದಕ್ಕೆ ಸ್ಥಳೀಯ ನಾಯಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ. 
 

ಬಳ್ಳಾರಿ (ನ.16): ಉಪಚುನಾವಣೆಗೆ ಇನ್ನಿಪ್ಪತ್ತು ದಿನ ಬಾಕಿ ಉಳಿದಿದೆ. ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಂತೆ ಬಂಡಾಯದ ಕೂಗೆದ್ದಿದೆ. ವಿಜಯನಗರದಲ್ಲಿ ಆನಂದ್ ಸಿಂಗ್‌ಗೆ ಟಿಕೆಟ್ ಕೊಟ್ಟಿರುವುದಕ್ಕೆ ಸ್ಥಳೀಯ ನಾಯಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ. 

ಹೊಸಪೇಟೆಯಲ್ಲಿ ನಡೆದ ಪಕ್ಷದ ಸಭೆಯು ಭಾರೀ ವಾಗ್ವಾದಕ್ಕೆ ಸಾಕ್ಷಿಯಾಯಿತು. ಆನಂದ್ ಸಿಂಗ್ ಮೋದಿಗೆ ಬೈದಿದ್ದಾರೆ, ಅವರ ಬೆಂಬಲಿಗರು ಮೋದಿ ಚೋರ್ ಹೈ ಎಂದು ಹೇಳಿದವರು. ಈಗ ಯಾವ ಮುಖ ಇಟ್ಕೊಂಡು ಬಿಜೆಪಿಗೆ ಬಂದಿದ್ದಾರೆ? ಎಂದು ಆಖ್ರೋಶ ವ್ಯಕ್ತಪಡಿಸಿದರು.

ಶಾಸಕರ ರಾಜೀನಾಮೆಯಿಂದ ತೆರವಾಗಿರುವ ರಾಜ್ಯದ 15 ಕ್ಷೇತ್ರಗಳಿಗೆ  ಉಪಚುನಾವಣೆ ನಡೆಯಲಿದೆ.  ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.
 

Video Top Stories