ರಾಜ್ಯಸಭೆಗೆ ಬಿಎಸ್ವೈ ಕಳಿಸಿದ್ದ ಹೆಸರು ಯಾರದ್ದು? ಕೋರ್ ಕಮೀಟಿ ರಹಸ್ಯ
ಕೋರ್ ಕಮೀಟಿ ಸಭೆಯಲ್ಲಿ ಬೇರೆ ಹೆಸರು ಚರ್ಚೆ ಮಾಡಲಾಗಿತ್ತು/ ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭೆ ಸ್ಥಾನ ನೀಡಲು ಕೇಂದ್ರ ನಾಯಕರ ತೀರ್ಮಾನ/ ವಿವರಣೆ ನೀಡಿದ ಬಿಎಸ್ವೈ
ಬೆಂಗಳೂರು(ಜೂ. 09) ಕೋರ್ ಕಮೀಟಿಯಲ್ಲಿ ಬೇರೆ ಹೆಸರು ಚರ್ಚೆ ಮಾಡಲಾಗಿತ್ತು. ಕಾರ್ಯಕರ್ತರ ಹೆಸರು ನೀಡಲು ಹೈಕಮಾಂಡ್ ಕೇಳಿಕೊಂಡಿತ್ತು. ಅದರೆಂತೆ ಕಾರ್ಯಕರ್ತರ ಹೆಸರನ್ನು ಶಿಫಾರಸ್ಸು ಮಾಡಲಾಯಿತು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ, ಅಶೋಕ್ ಗಸ್ತಿ ಯಾರು?
ಸಾಮಾನ್ಯ ಕಾರ್ಯಕರ್ತರಿಗೆ ಈ ಸಾರಿ ರಾಜ್ಯಸಭೆ ಟಿಕೆಟ್ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಕೇಂದ್ರದ ನಾಯಕರು ತೀರ್ಮಾನ ತೆಗೆದುಕೊಂಡಿದ್ದಾರೆ, ನಾವು ಅದನ್ನು ಸ್ವಾಗತ ಮಾಡಿದ್ದೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.