Asianet Suvarna News Asianet Suvarna News

'ಡಿಕೆಶಿ ಹಿಂದೆ ಒಕ್ಕಲಿಗ ಸಮುದಾಯ ಹೋಗಲು ಅವರೇನು ಕಿಂದರಿ ಜೋಗಿಯೇ'?

ಆರ್‌ಅರ್‌ ನಗರ ಉಪಚುನಾವಣಾ ಕಣ ರಂಗೇರುತ್ತಿದ್ದಂತೆ ಡಿಕೆಶಿ- ಕುಮಾರಸ್ವಾಮಿ ನಡುವಿನ ವಾಕ್ಸಮರ ಕೂಡಾ ಕಾವೇರುತ್ತಿದೆ. ಆರ್‌ಆರ್‌ ನಗರ ಕೋಟೆಯಲ್ಲಿ ಒಕ್ಕಲಿಗರ ಯುದ್ಧ ನಡೆಯುತ್ತಿದೆ.

ಬೆಂಗಳೂರು (ಅ. 16): ಆರ್‌ಅರ್‌ ನಗರ ಉಪಚುನಾವಣಾ ಕಣ ರಂಗೇರುತ್ತಿದ್ದಂತೆ ಡಿಕೆಶಿ- ಕುಮಾರಸ್ವಾಮಿ ನಡುವಿನ ವಾಕ್ಸಮರ ಕೂಡಾ ಕಾವೇರುತ್ತಿದೆ. ಆರ್‌ಆರ್‌ ನಗರ ಕೋಟೆಯಲ್ಲಿ ಒಕ್ಕಲಿಗರ ಯುದ್ಧ ನಡೆಯುತ್ತಿದೆ.

'ಒಕ್ಕಲಿಗರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾದ ಮಾತ್ರಕ್ಕೆ ಇಡೀ ಒಕ್ಕಲಿಗ ಸಮುದಾಯವೇ ಅವರ ಹಿಂದೆ ಹೋಗುವುದಕ್ಕೆ ಅವರೇನು ಕಿಂದರಿ ಜೋಗಿನಾ? ಕಿಂದರಿ ಜೋಗಿಯ ಹಿಂದೆ ಹೋದಂತೆ ಹೋಗಲು ಅವರಿಂದ ಸಮುದಾಯಕ್ಕೆ ಯಾವ ಕೊಡುಗೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಹರಿಹಾಯ್ದಿದ್ದಾರೆ.

RR ನಗರ ರಣಕಣದಲ್ಲಿ ಗೌಡ್ರ ಗದ್ದಲ: ಯಾರಿಗೆ ಒಲಿಯುತ್ತಾಳೆ ರಾಜರಾಜೇಶ್ವರಿ?

ಕಾಂಗ್ರೆಸ್‌ ನಾಯಕರಿಂದ ಹೊಸ ನಾಟಕ ಶುರುವಾಗಿದೆ. ಇದರದಿಂದ ಜನರ ಹೃದಯ ಗೆಲ್ಲಲು ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷರಾದ ಕೂಡಲೇ ಸಮಾಜದ ಮುಖಂಡರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ಯಶಸ್ವಿಯಾಗುವುದಿಲ್ಲ. ಈ ಹಿಂದೆ ಅವರು ಯಾರಿಗೆ ರಕ್ಷಣೆ ಕೊಟ್ಟಿದ್ದಾರೆ, ಜನರ ಕಷ್ಟಸುಖಕ್ಕೆ ಎಷ್ಟರಮಟ್ಟಿಗೆ ಭಾಗಿಯಾಗಿದ್ದಾರೆ ಎಂಬುದು ಗೊತ್ತಿದೆ ಎಂದಿದ್ಧಾರೆ.