Asianet Suvarna News Asianet Suvarna News

ಬೊಮ್ಮಾಯಿ ಜಿಲ್ಲೆಯವರು ಅಂತ ಅವಕಾಶ ತಪ್ಪಬಾರದು: ನೆಹರು ಓಲೇಕಾರ್ ಮಂತ್ರಿಗಿರಿ ಇಂಗಿತ

ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಬೊಮ್ಮಾಯಿ ಜಿಲ್ಲೆಯವರು ಅಂತ ಅವಕಾಶ ತಪ್ಪಬಾರದು ಎಂದು ಪರೋಕ್ಷವಾಗಿ ಸಚಿವ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದಾರೆ.

First Published Aug 2, 2021, 6:18 PM IST | Last Updated Aug 2, 2021, 6:19 PM IST

ವಿಜಯಪುರ, (ಅ.02): ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಬಿಜೆಪಿ ಶಾಸಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಕೆಲವರು ದೆಹಲಿಯಲ್ಲಿ ಲಾಬಿ ನಡೆಸಿದ್ದರೆ, ಇನ್ನೂ ಕೆಲವರು ಬಿಎಸ್‌ ಯಡಿಯೂರಪ್ಪ ಕಡೆಯಿಂದ ಸಚಿವ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆ.

ಸಿಎಂಗೆ 'ಸಂಪುಟ' ಸಂದೇಶ, ಪಟ್ಟಿ ಫೈನಲ್ ಆದ್ರೆ ಆಗಸ್ಟ್ 5 ರಂದು ಪ್ರಮಾಣ ವಚನ..?

ಇನ್ನು ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಬೊಮ್ಮಾಯಿ ಜಿಲ್ಲೆಯವರು ಅಂತ ಅವಕಾಶ ತಪ್ಪಬಾರದು ಎಂದು ಪರೋಕ್ಷವಾಗಿ ಸಚಿವ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದಾರೆ.