Asianet Suvarna News Asianet Suvarna News

ನಾನು ನಿಮ್ಮವನು, ನಿಮ್ಮ ಸಮುದಾಯವನು, ನಿಮ್ಮ ಮಗನಿಗೆ ಅವಕಾಶ ನೀಡಿ ಎಂದ ಡಿಕೆಶಿ!

ಒಂದು ಅವಕಾಶ ಕೊಡಿ, 9ನೇ ಬಾರಿಗೆ ಸಿಎಂ ಕುರ್ಚಿ ಆಸೆ ಬಿಚ್ಚಿಟ್ಟ ಡಿಕೆಶಿ,  ಬಿಜೆಪಿಯಲ್ಲೇ ಇರ್ತೀನಿ,ಸುದ್ದಿಗೋಷ್ಠಿಯಲ್ಲಿ ಭಾವುಕರಾದ ವಿ ಸೋಮಣ್ಣ, ರಾಮನಗರದಲ್ಲಿ ಡಿಕೆ ಸುರೇಶ್ ಸ್ಪರ್ಧೆ, ಜೆಡಿಎಸ್‌ಗೆ ಶಾಕ್ ನೀಡಿದ ಡಿಕೆಶಿ, ವೇದಿಕೆಯಲ್ಲಿ ವೈಲೆಂಟ್ ಆದ ವಿ ಸೋಮಣ್ಣ ಪುತ್ರ, ವಿಡಿಯೋ ವೈರಲ್ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Mar 14, 2023, 11:22 PM IST | Last Updated Mar 14, 2023, 11:22 PM IST

ಕುಮಾರಸ್ವಾಮಿಯವರನ್ನು 2 ಬಾಾರಿ ಈ ರಾಜ್ಯದ ಮುಖ್ಯಮಂತ್ರಿ ಮಾಡಿದ್ದೀರಿ. ದೇವೇಗೌಡರನ್ನು ಈ ದೇಶದ ಪ್ರಧಾನ ಮಂತ್ರಿ ಮಾಡಿದ್ದೀರಿ. ನಾನು ನಿಮ್ಮ ಮಗನಿದ್ದೇನೆ. ನಾನು ಮಣ್ಣಿನ ಮಗನಿದ್ದೇನೆ. ನಾನು ನಿಮ್ಮ ಸಮದಾದವನು, ನನಗೂ ಒಂದು ಅವಕಾಶ ಕೊಡಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಒಕ್ಕಲಿಗ ಕೋಟೆಯಲ್ಲಿ ಡಿಕೆ ಶಿವಕುಮಾರ್ 9ನೇ ಬಾರಿಗೆ ಒಕ್ಕಲಿಕ ಟ್ರಂಪ್ ಕಾರ್ಡ್ ಬಳಸಿದ್ದಾರೆ. ಇಷ್ಟೇ ಅಲ್ಲ ಸಿಎಂ ಕುರ್ಚಿ ಆಸೆಯನ್ನೂ ಬಿಚ್ಚಿಟ್ಟಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿ ನಿಂತು ಒಕ್ಕಲಿಗರ ಭಾವನೆಗಳನ್ನು ಅರಿತು, ಜೆಡಿಎಸ್‌ಗೆ ಕಾಂಗ್ರೆಸ್ ಮಾಡಿದ ನೆರವನ್ನು ನೆನಪಿಸಿದ್ದಾರೆ. ಇದೇ ವೇಳೆ ಈ ಬಾರಿ ನನಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.