'ಕೈ'ನಲ್ಲಿ ಮತ್ತೆ ಸಿಎಂ ಕುರ್ಚಿ ಚರ್ಚೆ: ಮುಖ್ಯಮಂತ್ರಿ ಆಗಲಿ ಅಂತ ಕೂಗ್ಬೇಡಿ, ಒಳಸಂಚು ಶುರುವಾಗುತ್ತೆ: ಪರಂ
* ಪರೋಕ್ಷವಾಗಿ ಮುಖ್ಯಮಂತ್ರಿಯಾಗೋ ಇಂಗಿತವನ್ನ ವ್ಯಕ್ತಪಡಿಸಿದ ಪರಮೇಶ್ವರ್
* ನಾನು ಮುಖ್ಯಮಂತ್ರಿ ಆಗೋದಿದ್ರೆ ಅದು ದೈವ ಇಚ್ಚೆ
* ನಾನು ಮುಖ್ಯಮಂತ್ರಿ ಅಂತ ದಯವಿಟ್ಟು ಯಾರು ಹೇಳಬೇಡಿ
ಬೆಂಗಳೂರು(ಜ.23): ಕಾಂಗ್ರೆಸ್ನಲ್ಲಿ ಮತ್ತೆ ಮುಖ್ಯಮಂತ್ರಿ ಚರ್ಚೆ ಶುರುವಾಗಿದೆ. ಮಾಜಿ ಡಿಎಸಿಂ ಡಾ. ಜಿ. ಪರಮೇಶ್ವರ್ ಅವರು ಪರೋಕ್ಷವಾಗಿ ಮುಖ್ಯಮಂತ್ರಿಯಾಗೋ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ. ಸಿಎಂ ಆಗಲಿ ಅಂತ ಕೂಗಬೇಡಿ ಒಳಸಂಚು ಶುರುವಾಗುತ್ತೆ. ನಾನು ಮುಖ್ಯಮಂತ್ರಿ ಆಗೋದಿದ್ರೆ ಅದು ದೈವ ಇಚ್ಚೆ, ಮುಖ್ಯಮಂತ್ರಿ ಅಂತ ದಯವಿಟ್ಟು ಯಾರು ಹೇಳಬೇಡಿ. ನೀವು ಇಲ್ಲಿ ಹೇಳಿದ್ರೆ ಅಲ್ಲಿ ನನಗೆ ಹೊಡೆತ ಬೀಳುತ್ತೆ, ನಿಮ್ಮ ಆಶೀರ್ವಾದ ನನಗಿರಬೇಕು, ನೀವು ತಥಾಸ್ತು ಅನ್ನಿ, ನಮ್ಮ ಪಕ್ಷದಲ್ಲಿ ತೀರ್ಮಾನ ಮಾಡೋರು ಮೇಲಿದ್ದಾರೆ ಅಂತ ಕಾರ್ಯಕರ್ತರಿಗೆ ಹೇಳಿದ್ದಾರೆ.