Asianet Suvarna News Asianet Suvarna News

BSY ಕುರ್ಚಿಗೆ ಸಂಚಕಾರ ತಂದೊಡ್ಡಲು ರಣಹದ್ದು ಹೆಣೆದಿರುವ ಸಂಚಿನ ಕಥೆ

ಬಿಎಸ್ವೈ ಕುರ್ಚಿಗೆ ಕಂಟಕ ತರಲು ಯೋಗೇಶ್ವರ್ ಜೊತೆ ಮತ್ತೊಬ್ಬರು ಕೈ ಜೋಡಿಸಿದ್ದಾರೆ. ಈ ಭಲೇ ಜೋಡಿ ಸೇರ್ಕೊಂಡು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಳಿಸಲು ಸಂಚು ಮಾಡಿದ್ದಾರೆ. ಸೈನಿಕನ ಜೊತೆ ಸೇರಿ ಸಂಚು ರೂಪಿಸಿರುವ ಆ ಆಸಾಮಿ ಯಾರು..? ಆತ ಬೇರಾರೂ ಅಲ್ಲ, ಒಂದು ಕಾಲದಲ್ಲಿ ಯಡಿಯೂರಪ್ಪನವರೇ ಸಾಕಿದ್ದ ಗಿಣಿ.

ಬೆಂಗಳೂರು, (ಮಾ.10): ಇದು ರಾಜ್ಯ ರಾಜಕೀಯವೇ ಬೆಚ್ಚಿ ಬೀಳುವಂತಹ ಸುದ್ದಿ. ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ತಲ್ಲಣ್ಣಗೊಳಿಸುವ ಸ್ಫೋಟಕ ಸುದ್ದಿ. ಇದು ಬಿಎಸ್ ವೈ ಪಟ್ಟಕ್ಕೇ ಸಂಚಕಾರ ತಂದೊಡ್ಡಲು ರಣಹದ್ದು ಹೆಣೆದಿರುವ ಸಂಚಿನ ಕಥೆ.

BSY ಸರ್ಕಾರ ಬೀಳಿಸಲು ಬಿಜೆಪಿಗನಿಂದಲೇ ತಂತ್ರ : ಹೊಸ ಬಾಂಬ್ ಸಿಡಿಸಿದ HDK

ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿದ್ದ ರಣಹದ್ದೊಂದು ಈಗ ಬಿಬಿಎಸ್ ವೈ ಬೇಟೆಗೆ ಹೊಂಚು ಹಾಕಿ ಕುಳಿತಿದೆ. ಸದ್ದಿಲ್ಲದೆ ಖೆಡ್ಡಾ ತೋಡಿರುವ ಆ ರಣಹದ್ದು ಯಾವುದು..? ಇಲ್ಲಿದೆ ನೋಡಿ ರಣಹದ್ದು ಸಂಚಿನ ಇಂಟ್ರೆಸ್ಟಿಂಗ್ ಸ್ಟೋರಿಯ ಪಿನ್ ಟು ಪಿನ್ ಡೀಟೇಲ್ಸ್.

Video Top Stories