Asianet Suvarna News Asianet Suvarna News

KS Eshwarappa:ಪ್ರತ್ಯೇಕ ರಾಷ್ಟ್ರದ ಕಿಚ್ಚು.. ಗುಂಡಿನ ಮಾತಿನ ರೊಚ್ಚು.. ಹದ್ದು ಮೀರಿದ ಮಾತು..!

“ಗುಂಡಿಕ್ಕುವ” ಮಾತಾಡಿದ ಈಶ್ವರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ..!
"ಡಿ.ಕೆ ಸುರೇಶ್, ವಿನಯ್ ಕುಲಕರ್ಣಿ ದೇಶದ್ರೋಹಿಗಳು" ಅಂದ್ರು ಕೇಸರಿ ಕಲಿ..!
"ತಾಕತ್ತಿದ್ರೆ ಕೇಸ್ ಹಾಕಿ.." ವಾರ್ನಿಂಗ್ ಕೊಟ್ಟ ಸಚಿವರಿಗೆ ಈಶ್ವರಪ್ಪ ಸವಾಲ್..!

ಕೇಸರಿ ಕಲಿ ಈಶ್ವರಪ್ಪ.. ಬಾಯಿ ಬಿಟ್ರೆ ಸಿಡಿಗುಂಡು. ಮಾತಾಡೋಕೆ ಶುರು ಮಾಡಿದ್ರೆ ಸಿಡಿಯೋದು ಮಾತುಗಳಲ್ಲ, ಮಾತಿನ ಬುಲೆಟ್‌ಗಳು. ಈಶ್ವರಪ್ಪನವರು(KS Eshwarappa) ವಿವಾದಗಳ ಸರದಾರನೂ ಹೌದು. ಕರ್ನಾಟಕದ (Karnataka)ಕೇಸರಿ ಪಡೆಯ ಬೆಂಕಿಯಂಥಾ ನಾಯಕನೀಗ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ. ಒಬ್ರು ದೇಶ ಒಡೆಯುವ ಮಾತನಾಡಿ ವಿವಾದ ಎಬ್ಬಿಸಿದ್ರು. ಮತ್ತೊಬ್ರು ಅದನ್ನು ಖಂಡಿತೋ ಭರದಲ್ಲಿ ಗುಂಡಿಕ್ಕಿ ಕೊಲ್ಲೋ ಮಾತುಗಳನಾಡಿದ್ರು. ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗ್ತಿರೋ ಅನ್ಯಾಯವನ್ನು ಪ್ರಶ್ನಿಸಿ ಮಾತಾಡೋ ಭರದಲ್ಲಿ ಕಾಂಗ್ರೆಸ್(Congress) ಸಂಸದ ಡಿಕೆ ಸುರೇಶ್(DK Suresh) ಹೊತ್ತಿಸಿದ ಪ್ರತ್ಯೇಕ ರಾಷ್ಟ್ರದ ಕಿಚ್ಚು, ಎಲ್ಲಿಯವರೆಗೆ ಬಂದು ನಿಂತಿದೆ ನೋಡಿ. ಈಶ್ವರಪ್ಪನವರು ಕಟ್ಟರ್ ಬಿಜೆಪಿಗ. ಅವ್ರದ್ದು ಕತ್ತು ಕುಯ್ದರೂ ಕರಗದ ಪಕ್ಷನಿಷ್ಠೆ. ಡಿಕೆ ಸುರೇಶ್ ಅವ್ರ ವಿವಾದಾತ್ಮಕ, ಖಂಡನಾತ್ಮಕ ಮಾತುಗಳನ್ನು ಖಂಡಿಸೋ ಭರದಲ್ಲಿ ಸ್ವತಃ ತಾವೂ ಕೂಡ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ:  ಅವನಿಗಿತ್ತು ತನ್ನ ಹೆಂಡತಿಯನ್ನ ಕೊಂದ ಅನುಭವ..! ಸೂಸೈಡ್ ಅಂತ ಬಂದ್ರು, ಆದ್ರೆ ಅದು ಕೊಲೆ..!

Video Top Stories