Asianet Suvarna News Asianet Suvarna News

ಲಕ್ಷ್ಮಣ ಸವದಿಗೆ ಡಬಲ್ ಶಾಕ್: ಟಿಕೆಟ್ ಇಲ್ಲ, ಡಿಸಿಎಂ ಹುದ್ದೆಯೂ ಹೋಗುತ್ತಲ್ಲಾ..?

ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು  ನೀಡಿದ ಹಿನ್ನೆಲೆ, ಅನರ್ಹರ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮೂಲ ಬಿಜೆಪಿಗರಿಗೆ ಶಾಕ್ ಆಗಿದೆ.

ಬೆಂಗಳೂರು, [ನ.13]: ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು  ನೀಡಿದ ಹಿನ್ನೆಲೆ, ಅನರ್ಹರ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮೂಲ ಬಿಜೆಪಿಗರಿಗೆ ಶಾಕ್ ಆಗಿದೆ.

ಅನರ್ಹರಿಗೆ ಹಿನ್ನಡೆಯಾಗಿ ನಮಗೆ ಸ್ಪರ್ಧಿಸಲು ಅವಕಾಶ ಸಿಗಬಹುದು ಎಂದು ಮೂಲ ಬಿಜೆಪಿಗರು ನಿರೀಕ್ಷಿಸಿದ್ದರು. ಇವರ ಪೈಕಿ ಲಕ್ಷ್ಮಣ ಸವದಿ ಸಹ ಒಳಗೊಳಗೆ ದೇವರಲ್ಲಿ ಪ್ರಾರ್ಥಿಸಿದವರೂ ಒಬ್ಬರು. 

ಆದ್ರೀಗ ಅನರ್ಹರಿಗೆ ಬಿಜೆಪಿಯಿಂದಲೇ ಟಿಕೆಟ್​ ಸಿಗುವ ಸಾಧ್ಯತೆ ಹಿನ್ನೆಲೆ, ಬಿಜೆಪಿಯ ಹಲವರಿಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ನಿರಾಸೆಯಾಗಿದ್ದು, ಲಕ್ಷ್ಮಣ ಸವದಿಗೆ ಅಥಣಿ  ಬೈ ಎಲೆಕ್ಷನ್ ಟಿಕೆಟ್ ಕಟ್ ಆಗುವುದು ಪಕ್ಕಾ ಆಗಿದೆ. ಒಂದು ವೇಳೆ ಟಿಕೆಟ್ ಕಟ್ ಆದ್ರೆ ಡಿಸಿಎಂ ಹುದ್ದೆಯೂ ಗೋತಾ. ಇದರ ಮತ್ತಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.... 

Video Top Stories