Asianet Suvarna News Asianet Suvarna News

ನನಗೆ ಪಾಠ ಹೇಳಿಕೊಟ್ರೆ ಹೇಗೆ? ಸ್ವಲ್ಪವಾದ್ರೂ ಉಪಕಾರ ಸ್ಮರಣೆ ಇರ್ಬೇಕು: ಸುಧಾಕರ್‌ಗೆ ಸಿದ್ದು ಗುದ್ದು

ಕೋವಿಡ್19 ಮೆಡಿಕಲ್ ಕಿಟ್ ಖರೀದಿಯಲ್ಲಿ ರಾಜ್ಯ ಸರ್ಕಾರ ಭಷ್ಟಾಚಾರ ಮಾಡಿದೆ ಎಂದು ರಾಜ್ಯ ಸರ್ಕಾರದ ಆರೋಪ ಮತ್ತು ವಾಗ್ದಾಳಿ ಇಂದು (ಶುಕ್ರವಾರ) ಕೂಡ ಮುಂದುವರಿದೆ.

ಬೆಂಗಳೂರು, (ಜುಲೈ.24): ಕೋವಿಡ್19 ಮೆಡಿಕಲ್ ಕಿಟ್ ಖರೀದಿಯಲ್ಲಿ ರಾಜ್ಯ ಸರ್ಕಾರ ಭಷ್ಟಾಚಾರ ಮಾಡಿದೆ ಎಂದು ರಾಜ್ಯ ಸರ್ಕಾರದ ಆರೋಪ ಮತ್ತು ವಾಗ್ದಾಳಿ ಇಂದು (ಶುಕ್ರವಾರ) ಕೂಡ ಮುಂದುವರಿದೆ.

ಸಿದ್ದರಾಮಯ್ಯನವರ ಸಹಕಾರ, ಮಾರ್ಗದರ್ಶನ ಸದಾ ಸ್ಮರಿಸುತ್ತೇನೆ ಎನ್ನುತ್ತಲೇ ಟಾಂಗ್ ಕೊಟ್ಟ ಸುಧಾಕರ್

ಇನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರ ಹೇಳಿಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಸುಧಾಕರ್ ಎಷ್ಟು ವರ್ಷ ಮಂತ್ರಿನಪ್ಪ(?) ನಾನು ಎಷ್ಟು ವರ್ಷಗಳಿಂದ ಸಚಿವನಾಗಿದ್ದೇನಪ್ಪಾ(?) ಅಪ್ರೂವಲ್, ಪ್ರಪೋಸಲ್ ಎಲ್ಲವೂ ಗೊತ್ತಿದೆಯಪ್ಪಾ ನನಗೆ, ಇವೆಲ್ಲಾ ಗೊತ್ತಿಲ್ಲದೆ ನಾನು 13 ಬಜೆಟ್ ಮಂಡಿಸಿದ್ನಾ(?) ಎಂದು ಸಚಿವರಿಗೆ ಟಾಂಗ್​ ಕೊಟ್ಟಿದ್ದಾರೆ.