RR ನಗರ ಉಪ ಕದನ: ಮುನಿರತ್ನ, ಕೈ MLC ನಾರಾಯಣಸ್ವಾಮಿ ವಿರುದ್ಧ FIR
ಸಲೀಮ್ ಅಹಮದ್ ನೀಡಿದ ದೂರಿನನ್ವಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮುನಿರತ್ನ ವಿರುದ್ಧ ಎಫ್ಐಆರ್| ಬಿಜೆಪಿ ನೀಡಿದ ದೂರಿನನ್ವಯ ನಾರಾಯಣಸ್ವಾಮಿ ವಿರುದ್ಧ ಎಫ್ಐಆರ್ ದಾಖಲು| ಕಾಂಗ್ರೆಸ್-ಬಿಜೆಪಿ ನಾಯಕರಿಂದ ದೂರು-ಪ್ರತಿ ದೂರು|
ಬೆಂಗಳೂರು(ಅ.27): ಆರ್. ಆರ್. ನಗರ ಉಪಚುನಾವಣೆ ರಂಗೇರುತ್ತಿದೆ. ಕಾಂಗ್ರೆಸ್-ಬಿಜೆಪಿ ನಾಯಕರಿಂದ ದೂರು-ಪ್ರತಿ ದೂರು ದಾಖಲಾಗಿವೆ. ಹೌದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೂ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿವೆ. ಸಲೀಮ್ ಅಹಮದ್ ನೀಡಿದ ದೂರಿನನ್ವಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ.
'ಸಿದ್ದರಾಮಯ್ಯ ಧಮ್, ಆಡಳಿತ ಎರಡನ್ನೂ ನೋಡಿದ್ದೇನೆ'
ಇನ್ನು ಬಿಜೆಪಿ ನೀಡಿದ ದೂರಿನನ್ವಯ ನಾರಾಯಣಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮತದಾರರ ಗುರುತಿನ ಚೀಟಿ ಕಲೆಕ್ಟ್ ಮಾಡಿ, ಹಣದ ಆಮಿಷವೊಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಹೀಗಾಗಿ ಕೈ ಎಂಎಲ್ಸಿ ವಿರುದ್ಧ ಎಫ್ಐಆರ್ ದಾಖಲಾಗಿದೆ.