Asianet Suvarna News Asianet Suvarna News

ಸಿದ್ದರಾಮಯ್ಯ ಮನೆಗೆ ಕೈ ನಾಯಕರ ದಂಡು, MLC ಟಿಕೆಟ್‌ಗಾಗಿ ಇವರೆಲ್ಲಾ ಬಂದ್ರು...

ಇದೇ ಜೂನ್​​ 29ರಂದು ಏಳು ಸ್ಥಾನಗಳಿಗೆ ಎಂಎಲ್​​ಸಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್​ಗಾಗಿ ಕೆಲವು ಕಾಂಗ್ರೆಸ್​​ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಒತ್ತಡ ಹಾಕಿದ್ದಾರೆ.

ಬೆಂಗಳೂರು(ಜೂ.13): ಇದೇ ಜೂನ್​​ 29ರಂದು ಏಳು ಸ್ಥಾನಗಳಿಗೆ ಎಂಎಲ್​​ಸಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್​ಗಾಗಿ ಕೆಲವು ಕಾಂಗ್ರೆಸ್​​ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಒತ್ತಡ ಹಾಕಿದ್ದಾರೆ.

ದೇವೇಗೌಡ್ರಿಗಾಗಿ ಸೀಟು ತ್ಯಾಗ ಮಾಡಿದ ನಾಯಕನಿಗೆ ಜೆಡಿಎಸ್ ವಿಧಾನ ಪರಿಷತ್ ಟಿಕೆಟ್...?

ಹೌದು, ಇಂದು (ಶನಿವಾರ) ಬೆಂಗಳೂರಿನ ಸಿದ್ದರಾಮಯ್ಯನವರ ಸರ್ಕಾರಿ ನಿವಾಸಕ್ಕೆ ಕಾಂಗ್ರೆಸ್​ ನಾಯಕರ ದಂಡೇ ಭೇಟಿ ನೀಡಿದ್ದು, ಎಂಎಲ್​​ಸಿ ಟಿಕೆಟ್​ ನೀಡಬೇಕೆಂದು ಬೇಡಿಕೆಯಿಟ್ಟರು.