ಚುನಾವಣೆ ಹೊಸ್ತಿಲಲ್ಲಿ ಸಚಿವ ಸಂಪುಟ ವಿಸ್ತರಣೆ?
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಾಧ್ಯತೆ ಇದ್ದು, ತಿಂಗಳಾಂತ್ಯಕ್ಕೆ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂತಾ ಎಂಬ ಪ್ರಶ್ನೆ ಮೂಡಿದೆ. ನವೆಂಬರ್ 29ರಂದು ಹೊಸ ಸಚಿವರ ಪಟ್ಟಿ ಜೊತೆ ವಾಪಸ್ ಆಗ್ತಾರಾ ಸಿಎಂ ಬೊಮ್ಮಾಯಿ?. ತಿಂಗಳಾಂತ್ಯಕ್ಕೆ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಸಾಧ್ಯತೆಯಿದ್ದು, ಸಂಪುಟ ಸೇರಲು ಸಿ.ಪಿ ಯೋಗೇಶ್ವರ್, ರಮೇಶ್ ಜಾರಕಿಹೋಳಿ ಕಸರತ್ತು ನಡೆಸಿದ್ದಾರೆ. ಕಳೆದ ಬಾರಿ ಸಿಎಂ ಬೊಮ್ಮಾಯಿ ಖಾಲಿ ಕೈಯಲ್ಲಿ ಬಂದಿದ್ರು.ಈ ಬಾರಿ ಪುನಾರಚನೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಿಎಂ ಕ್ಷೇತ್ರದಲ್ಲಿಯೇ ಕಳಪೆ ಕಾಮಗಾರಿ: ಗುತ್ತಿಗೆದಾರನ ಮೇಲೆ ಸೋಮಣ್ಣ ಗರಂ