5 ವರ್ಷ ಹಿಂದಿನ ಫೈಲ್ ಓಪನ್; ಹೊಸಕೋಟೆ ಗೆಲ್ಲಲು BSY ಹೊಸ ಪ್ಲಾನ್!
ಉಪ-ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಆಡಳಿತರೂಢ ಬಿಜೆಪಿ ಹೊಸ ಅಸ್ತ್ರವನ್ನು ಪ್ರಯೋಗಿಸಲು ಸಿದ್ಧತೆ ನಡೆಸಿದೆ. ಖುದ್ದು ಸಿದ್ದರಾಮಯ್ಯ ತನ್ನ ಶಿಷ್ಯನಿಗಾಗಿ ಮಾಡದ ಕೆಲಸವನ್ನು ಈಗ ಸಿಎಂ ಬಿ.ಎಸ್. ಯಡಿಯೂರಪ್ಪ ಮಾಡಲು ಹೊರಟಿದ್ದಾರೆ.
ಬೆಂಗಳೂರು (ಅ.18): ಕಾಂಗ್ರೆಸ್- ಜೆಡಿಎಸ್ ಶಾಸಕರ ರಾಜೀನಾಮೆಯಿಂದ ತೆರವಾದ ಕ್ಷೇತ್ರಗಳಿಗೆ ಉಪ-ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಆಡಳಿತರೂಢ ಬಿಜೆಪಿ ಹೊಸ ಅಸ್ತ್ರವನ್ನು ಪ್ರಯೋಗಿಸಲು ಸಿದ್ಧತೆ ನಡೆಸಿದೆ.
ಖುದ್ದು ಸಿದ್ದರಾಮಯ್ಯ ತನ್ನ ಶಿಷ್ಯನಿಗಾಗಿ ಮಾಡದ ಕೆಲಸವನ್ನು ಈಗ ಸಿಎಂ ಬಿ.ಎಸ್. ಯಡಿಯೂರಪ್ಪ ಮಾಡಲು ಹೊರಟಿದ್ದಾರೆ. ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ 2014ರಲ್ಲಿ ಸಲ್ಲಿಸಿದ್ದ ಮನವಿಯು ನೆನೆಗುದಿಗೆ ಬಿದ್ದಿತ್ತು.
ಇದೀಗ ಆ ಕಡತವನ್ನು ಯಡಿಯೂರಪ್ಪ ಮತ್ತೆ ತರಿಸಿದ್ದಾರೆ. ಆ ಮೂಲಕ ಎಂ.ಟಿ.ಬಿ.ನಾಗರಾಜ್ ಗೆಲುವನ್ನು ಖಚಿತಪಡಿಸಲು ಹೊಸ ತಂತ್ರವನ್ನು ಮಾಡಿದ್ದಾರೆ. ಏನದು ಫೈಲ್? ಏನಿದೆ ಅದರಲ್ಲಿ? ಇಲ್ಲಿದೆ ಡೀಟೆಲ್ಸ್....