ಬೊಮ್ಮಾಯಿ ಸಂಪುಟದಲ್ಲಿ ಪಂಚಮಸಾಲಿ ಪ್ರಾಬಲ್ಯ, ಪವರ್ ಸೆಂಟರ್ ಆಗಿದ್ದಾರೆ ವಚನಾನಂದ ಸ್ವಾಮೀಜಿ!
ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಪಂಚಮಸಾಲಿ ಸಮುದಾಯದಿಂದ ಮೂವರು ಮಂತ್ರಿಗಳಾಗಿದ್ದಾರೆ. ಮೂವರಿಗೂ ಸಿಕ್ಕಿದ್ದು ಪ್ರಬಲ ಖಾತೆಗಳು. ನಿರಾಣಿಗೆ ಕೈಗಾರಿಗೆ, ಸಿಸಿ ಪಾಟೀಲ್ಗೆ ಲೋಕೋಪಯೋಗಿ, ಶಂಕರ್ ಪಾಟೀಲ್ಗೆ ಜವಳಿ ಮತ್ತು ಸಕ್ಕರೆ ಖಾತೆ.
ಬೆಂಗಳೂರು (ಆ. 11): ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಪಂಚಮಸಾಲಿ ಸಮುದಾಯದಿಂದ ಮೂವರು ಮಂತ್ರಿಗಳಾಗಿದ್ದಾರೆ. ಮೂವರಿಗೂ ಸಿಕ್ಕಿದ್ದು ಪ್ರಬಲ ಖಾತೆಗಳು. ನಿರಾಣಿಗೆ ಕೈಗಾರಿಗೆ, ಸಿಸಿ ಪಾಟೀಲ್ಗೆ ಲೋಕೋಪಯೋಗಿ, ಶಂಕರ್ ಪಾಟೀಲ್ಗೆ ಜವಳಿ ಮತ್ತು ಸಕ್ಕರೆ ಖಾತೆ. ಇದರ ಹಿಂದಿರುವ ಶಕ್ತಿ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ.
'ಆನಂದ' ವಿಲ್ಲದ ಖಾತೆ ಬೇಡ..ಗೌಡರ ಕಾರಣಕ್ಕೆ ಬಿಜೆಪಿಯಲ್ಲಿ ಕಾರ್ಮೋಡ!
ಪಂಚಮಸಾಲಿಗಳ ಪ್ರತಿಭಟನೆಯೇ ಇರಲಿ, ರಾಜಕೀಯ ಪ್ರಾತಿನಿಧ್ಯವೇ ಇರಲಿ, ಎಲ್ಲಿ ಯಾವ ದಾಳವನ್ನು ಉರುಳಿಸಿದರೆ ಯಾವ ಕೆಲಸ ಆಗುತ್ತೆ ಎಂದು ಅರಿತಿರುವ ವಚನಾನಂದ ಸ್ವಾಮೀಜಿ ತಮ್ಮ ಸಮಾಜಕ್ಕೆ ಹೆಚ್ಚು ಪ್ರಾತಿನಿಧ್ಯ ಸಿಗುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ವಚನಾನಂದ ಸ್ವಾಮೀಜಿಯವರ ರಾಜಕೀಯ ಶಕ್ತಿ ಎಂಥದ್ದು..? ಇಲ್ಲಿದೆ ವಿಶೇಷ ವರದಿ.