ಬಿಎಸ್ವೈ ಕೈಗೆ ಉಪಸಮರದ ಮಧ್ಯಂತರ ವರದಿ! ಯಾರಿಗೆ ಎಷ್ಟು ಸೀಟು ಬರಲಿದೆ?
- ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕ್ಷಣಗಣನೆ ಶುರು
- ರಾಜಕೀಯ ಪಕ್ಷಗಳಿಂದ ಭರ್ಜರಿ ಪ್ರಚಾರ, ಸೋಲು-ಗೆಲುವಿನ ಲೆಕ್ಕಾಚಾರ
- ಬಿ.ಎಸ್. ಯಡಿಯೂರಪ್ಪ ಕೈಗೆ ಮಧ್ಯಂತರ ವರದಿ
ಬೆಂಗಳೂರು (ನ.29): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದ ನಡುವೆ, ಸೋಲು-ಗೆಲುವಿನ ಲೆಕ್ಕಾಚಾರ ಹಾಕಲಾರಂಭಿಸಿವೆ.
ಉಪಚುನಾವಣೆಗೆ ಸಂಬಂಧಿಸಿದ ಮಧ್ಯಂತರ ವರದಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೈಗೆ ಸೇರಿದೆ. ಯಾರಿಗೆ ಎಷ್ಟು ಸೀಟು ಸಿಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಡಿ.05ಕ್ಕೆ ಉಪಚುನಾವಣೆ ನಡೆಯಲಿದ್ದು, ಡಿ.09 ಕ್ಕೆ ಮತ ಎಣಿಕೆ ನಡೆಯಲಿದೆ. ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ.