Asianet Suvarna News Asianet Suvarna News

ಹೊಸಪೇಟೆ: ಆನಂದ್ ಸಿಂಗ್‌ಗೆ ಡಬಲ್ ಶಾಕ್; ಏಕಾಂಗಿಯಾದ್ರಾ ಮೈನಿಂಗ್ ಲಾರ್ಡ್?

ಹೊಸಪೇಟೆಯಲ್ಲಿ ಅನರ್ಹ ಶಾಸಕ ಆನಂದ್ ಸಿಂಗ್ ಏಕಾಂಗಿ; ಯಡಿಯೂರಪ್ಪ ಆದೇಶವಿದ್ದರೂ ತಲೆಹಾಕದ ಜಿಲ್ಲಾ ನಾಯಕರು; ಬಿಜೆಪಿಗೆ ಮುಳುವಾಗುತ್ತಾ ಭಿನ್ನಮತ? ಚುನಾವಣೆಗೆ ಕ್ಷಣಗಣನೆ, ಬಿಜೆಪಿಯಲ್ಲಿ ಆತಂಕ

ಬಳ್ಳಾರಿ (ನ.30): ಉಪಚುನಾವಣೆಗೆ ಇನ್ನು ನಾಲ್ಕು ದಿನಗಳಷ್ಟೇ ಬಾಕಿಯಿವೆ. ಮೊದಲೇ ಬಂಡಾಯದ ಬಿಸಿ ಇರುವ ಹೊಸಪೇಟೆಯಲ್ಲಿ ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಸಹಜವಾಗಿ ಇದು ಕಮಲ ಪಾಳೆಯದಲ್ಲಿ ಆತಂಕ ಹುಟ್ಟುಹಾಕಿದೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿ.05ರಂದು ಉಪಚುನಾವಣೆ ನಡೆಯಲಿದೆ. ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿ.09ಕ್ಕೆ ಮತ ಎಣಿಕೆ ನಡೆಯಲಿದೆ. 

 

Video Top Stories