ಸಂಧಾನ ಸಕ್ಸಸ್: ಆನಂದ್ ಸಿಂಗ್ ಮನವೊಲಿಸಿದ ಸಿಎಂ ಬೊಮ್ಮಾಯಿ
* ಆನಂದ್ ಸಿಂಗ್ ರಾಜೀನಾಮೆ ಇಲ್ಲ
* ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಆನಂದ್ ಸಿಂಗ್
* ಸಚಿವನಾಗಿ ಮುಂದುವರಿಯಲು ಆನಂದ್ ಸಿಂಗ್ ನಿರ್ಧಾರ
ಬೆಂಗಳೂರು(ಆ.24): ಖಾತೆ ಬದಲಾವಣೆ ಮಾಡದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಆನಂದ್ ಸಿಂಗ್ ಅವರ ಮನವೊಲಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಕೆಲ ಹೊತ್ತಿನ ಹಿಂದಷ್ಟೇ ಶಾಸಕ ರಾಜೂಗೌಡ ಅವರ ಜೊತೆ ಸಚಿವ ಆನಂದ್ ಸಿಂಗ್ ಸಿಎಂ ಬೊಮ್ಮಾಯಿ ಅವರನ್ನ ಭೇಟಿಯಾಗಿದ್ದರು. ರಾಜೀನಾಮೆ ನೀಡದಂತೆ ಸಿಎಂ ಹೇಳಿದ ಮಾತಿಗೆ ಆನಂದ್ ಸಿಂಗ್ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಆನಂದ್ ಸಿಂಗ್ - ಸಿಎಂ ಸಂಧಾನ ಸಕ್ಸಸ್ ಆಗಿದೆ. ಸಚಿವನಾಗಿ ಮುಂದುವರಿಯಲು ಆನಂದ್ ಸಿಂಗ್ ಅವರು ನಿರ್ಧಾರವನ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.