Asianet Suvarna News Asianet Suvarna News

'ಗೌಡ್ರ ಕುಟುಂಬ ನೀರು ಬಿಡದೇ ಇದ್ರೆ ಕಮಿಟಿ ಒದ್ದು ನೀರು ಬಿಡಿಸಲಿದೆ'

ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡು ಮುಖಭಂಗ ಅನುಭವಿಸಿರುವ ಎಚ್​.ಡಿ.ದೇವೇಗೌಡ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ಜಿ.ಎಸ್​.ಬಸವರಾಜ್​ ಅವರು ಗಂಭೀರ ಆರೋಪ ಮಾಡಿದ್ದಾರೆ.

ಹೇಮಾವತಿ ನೀರಿನ  ವಿಚಾರದಲ್ಲಿ ದ್ವೇಷದ ರಾಜಕೀಯ ಶುರುವಾಯ್ತಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಗೌಡರ ಕುಟುಂಬ ನೀರು ಬಿಡದೇ ಇದ್ದರೆ ಕಮಿಟಿ ಒದ್ದು ನೀರು ಬಿಡಿಸಲಿದೆ ಎಂದು ತುಮಕೂರು ಬಿಜೆಪಿ ಸಂಸದ ಜಿ.ಎಸ್.ಬಸವರಾಜ್ ಗುಡುಗಿದ್ದಾರೆ. ಹಾಗಾದ್ರೆ ಬಸವರಾಜ್ ಏನೆಲ್ಲ ಮಾತನಾಡಿದ್ದಾರೆ ನೀವೇ ನೋಡಿ..

Video Top Stories