Asianet Suvarna News Asianet Suvarna News

'ಸಮುದಾಯದ ಶಾಸಕರು ರಿಸೈನ್ ಮಾಡಿದ್ರೆ HDK ಗೊಟಕ್ ಅಂತಾರೆ'

ಪರಿಶಿಷ್ಟ ಪಂಗಡಕ್ಕೆ 7.5ರಷ್ಟು ಮೀಸಲಾತಿಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಪ್ರಸನ್ನಾನಂದ ಮಹಾಸ್ವಾಮೀಜಿ ಕುಮಾರಸ್ವಾಮಿ ವಿರುದ್ಧ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಬೆಂಗಳೂರು, (ಜೂ.25): ಪರಿಶಿಷ್ಟ ಪಂಗಡಕ್ಕೆ 7.5ರಷ್ಟು ಮೀಸಲಾತಿಗೆ ಒತ್ತಾಯಿಸಿ ಮಂಗಳವಾರ ಬೆಂಗಳೂರಿನಲ್ಲಿ ವಾಲ್ಮೀಕಿ ಸಮುದಾಯ ಬೃಹತ್ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿತು. 

ಈ ವೇಳೆ ಮಾತನಾಡಿದ ಪ್ರಸನ್ನಾನಂದ ಮಹಾಸ್ವಾಮೀಜಿ, ಸಮುದಾಯದ ಎಲ್ಲಾ ಶಾಸಕರು ರಾಜೀನಾಮೆ ಪತ್ರ ನನ್ನ ಕೈಗೆ ಕೊಡಿ ಕುಮಾರಸ್ವಾಮಿ ಅಲ್ಲ ಅವರಪ್ಪ ಮಾತು ಕೇಳುತ್ತಾನೆ ಎಂದು ವಾಗ್ದಾಳಿ ನಡೆಸಿದರು.

ಹೀಗೆ ಮಾತನಾಡುವ ಭರದಲ್ಲಿ ಕುಮಾರಸ್ವಾಮಿ ವಿರುದ್ಧ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದರು. ಅಷ್ಟಕ್ಕೂ ಸ್ವಾಮೀಜಿಗಳು ಹೇಳಿದ್ದಾದರೂ ಏನು..? ವಿಡಿಯೋನಲ್ಲಿ ನೋಡಿ.