Asianet Suvarna News Asianet Suvarna News

ದೇವೇಗೌಡ್ರ ಮಧ್ಯಂತರ ಎಲೆಕ್ಷನ್ ಬಾಂಬ್: ಇತ್ತ ದಿಢೀರ್ ಸಭೆ ನಡೆಸಿದ ಸಿದ್ದು..!

ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಅವರು ರಾಜ್ಯದಲ್ಲಿ ಮಂಧ್ಯಂತರ ಚುನಾವಣೆ ಬಾಂಬ್ ಸಿಡಿಸಿದ ಬೆನ್ನಲ್ಲೇ ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅತ್ತ ಮೈಸೂರಿನಲ್ಲಿ ಕಾಂಗ್ರೆಸ್ ನಾಯಕರ ದಿಢೀರ್ ಸಭೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಮೈಸೂರು, [ಜೂ.23]: ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಅವರು ರಾಜ್ಯದಲ್ಲಿ ಮಂಧ್ಯಂತರ ಚುನಾವಣೆ ಬಾಂಬ್ ಸಿಡಿಸಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅತ್ತ ಮೈಸೂರಿನಲ್ಲಿ ಕಾಂಗ್ರೆಸ್ ನಾಯಕರ ದಿಢೀರ್ ಸಭೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಮೈಸರಿನಲ್ಲಿ ಇಂದು [ಭಾನುವಾರ] ಖಾಸಗಿ ಹೋಟೆಲ್ ನಲ್ಲಿ ಪುತ್ರ ಯತೀಂದ್ರ ಅವರ ವರುಣಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಜತೆ  ಸೀಕ್ರೆಟ್ ಮಿಟಿಂಗ್ ಮಾಡಿದರು. ಚಾಮುಂಡೇಶ್ವರಿಯಲ್ಲಿ ತಮ್ಮ ಸೋಲಿನ ಬಗ್ಗೆಯೂ ಇಷ್ಟು ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ, ಇದೀಗ ತವರಿನಲ್ಲಿ ಸಿದ್ದರಾಮಯ್ಯ ಸಭೆಗಳ ಲೆಕ್ಕಚಾರಗಳೇನು ಎನ್ನುವುದು ಮಾತ್ರ ನಿಗೂಢವಾಗಿದೆ.