Asianet Suvarna News Asianet Suvarna News

ಸುಪ್ರೀಂ ತೀರ್ಪಿನ ಆಧಾರ ಕೊಟ್ಟು ‘ಆಟ’ ಮುಂದುವರಿಸಿದ ಶಿಕಾರಿಪುರ ಪ್ರಾಚಾರ್ಯ

ಶಿವಮೊಗ್ಗ  ಜಿಲ್ಲೆಯ ವಸತಿ ಶಾಲೆಯೊಂದರ ಪ್ರಾಂಶುಪಾಲನೊಬ್ಬ ಶಾಲೆಯಲ್ಲಿಯೇ ಮಹಿಳೆಯೊಂದಿಗೆ ಚಕ್ಕಂದವಾಡುವಾಗಲೇ ಸಿಕ್ಕಿಬಿದ್ದಿದ್ದಾನೆ.  ಶಿಕಾರಿಪುರ ತಾಲೂಕಿನ ಮಳೂರು ಗ್ರಾಮದಲ್ಲಿ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಪ್ಪ ಶಾಲೆಯ ಉದ್ಯೋಗಿ ಮಹಿಳೆಯೊಂದಿಗೆ ಚಕ್ಕಂದವಾಡಿದ್ದಾನೆ. ಇವರಿಬ್ಬರ ಆಟ ಕದ್ದು ಮುಚ್ಚಿ ನಡೆಯುತ್ತಿದ್ದು, ಇದು ಬೇರೆ ಶಿಕ್ಷಕರು ಮತ್ತು ಮಕ್ಕಳಿಗೆ ಗೊತ್ತಾಗಿ, ಗ್ರಾಮಸ್ಥರು ಪ್ರಾಂಶುಪಾಲನ ವರ್ತನೆ ಬಗ್ಗೆ ಆಕ್ಷೇಪಿಸಿದ್ದಾರೆ. 

ಶಿವಮೊಗ್ಗ  ಜಿಲ್ಲೆಯ ವಸತಿ ಶಾಲೆಯೊಂದರ ಪ್ರಾಂಶುಪಾಲನೊಬ್ಬ ಶಾಲೆಯಲ್ಲಿಯೇ ಮಹಿಳೆಯೊಂದಿಗೆ ಚಕ್ಕಂದವಾಡುವಾಗಲೇ ಸಿಕ್ಕಿಬಿದ್ದಿದ್ದಾನೆ.  ಶಿಕಾರಿಪುರ ತಾಲೂಕಿನ ಮಳೂರು ಗ್ರಾಮದಲ್ಲಿ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಪ್ಪ ಶಾಲೆಯ ಉದ್ಯೋಗಿ ಮಹಿಳೆಯೊಂದಿಗೆ ಚಕ್ಕಂದವಾಡಿದ್ದಾನೆ. ಇವರಿಬ್ಬರ ಆಟ ಕದ್ದು ಮುಚ್ಚಿ ನಡೆಯುತ್ತಿದ್ದು, ಇದು ಬೇರೆ ಶಿಕ್ಷಕರು ಮತ್ತು ಮಕ್ಕಳಿಗೆ ಗೊತ್ತಾಗಿ, ಗ್ರಾಮಸ್ಥರು ಪ್ರಾಂಶುಪಾಲನ ವರ್ತನೆ ಬಗ್ಗೆ ಆಕ್ಷೇಪಿಸಿದ್ದಾರೆ. 

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಯಾರು ಯಾರೊಂದಿಗೆ ಬೇಕಾದರೂ ಸಂಬಂಧ ಇಟ್ಟುಕೊಳ್ಳಬಹುದು ಎಂದು ಪ್ರಾಂಶುಪಾಲ ಗ್ರಾಮಸ್ಥರಿಗೆ ಹೇಳಿದ್ದಾನೆ. ಅಲ್ಲದೇ, ತನ್ನ ಆಟವನ್ನು ಮುಂದುವರಿಸಿದ್ದಾನೆ. ಇತ್ತೀಚೆಗೆ ಅಡುಗೆ ಸಾಮಗ್ರಿಗಳನ್ನು ಇಡಲಾಗಿದ್ದ ಕೊಠಡಿಯಲ್ಲಿ ಮಹಿಳಾ ಉದ್ಯೋಗಿಯೊಂದಿಗೆ ಇದ್ದ ಸಂದರ್ಭದಲ್ಲಿ ಅವರಿಗೆ ಗೊತ್ತಾಗದಂತೆ ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.

ಈ ವಿಡಿಯೋ ಸೋಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಮಾಜ ಕಲ್ಯಾಣ ಇಲಾಖೆ ಅಕಾರಿಗಳಿಗೆ ವಸತಿ ಶಾಲೆ ಪ್ರಾಂಶುಪಾಲನ ಈ ವಿಷಯ ತಿಳಿಸಿದ್ದರೂ, ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಮತ್ತು ಗ್ರಾಮಸ್ಥರು ದೂರಿದ್ದಾರೆ.