ಬೆಳಗಾವಿ: 7 ಜೀವಗಳ ಬಲಿ ಪಡೆದ ಭೀಕರ ಅಪಘಾತ
ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ಸ್ಥಳದಲ್ಲೇ ಐವರು ದುರ್ಮರಣ ಹೊಂದಿದ್ದಾರೆ. ಬೆಳಗಾವಿ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 4ರ ಶ್ರೀನಗರ ಬಳಿ ಘಟನೆ ನಡೆದಿದ್ದು ಕೊಲ್ಲಾಪುರದಿಂದ ಬೆಳಗಾವಿತ್ತ ಬರುತ್ತಿದ್ದ ಕಾರ್ ಟೈರ್ ಸ್ಫೋಟಗೊಂಡು ಎದುರುಗಡೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಕಾರ್ ನಲ್ಲಿದ್ದ ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಇಬ್ಬರು ಮೃತರಾಗಿದ್ದಾರೆ. ಮೃತರನ್ನು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಪಡಗಾಂವ ತಾಲೂಕಿನ ಶರಣಪೂರದ ನಂದು ಕಿಶನ್ ಕುಮಾರ್, ಮಹೇಶ್, ಅಮೂಲ್ ನೀಲೆ, ಸುರೇಶ ಕನೇರಿ, ಅಮೂಲ್ ರಮೇಶ್ ಚವರೆ, ಗೋಪಿನಾಥ್, ರವೀಂದ್ರ ವಾಡೇಕರ್ ಎಂದು ಗುರುತಿಸಲಾಗಿದೆ.
ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ಸ್ಥಳದಲ್ಲೇ ಐವರು ದುರ್ಮರಣ ಹೊಂದಿದ್ದಾರೆ. ಬೆಳಗಾವಿ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 4ರ ಶ್ರೀನಗರ ಬಳಿ ಘಟನೆ ನಡೆದಿದ್ದು ಕೊಲ್ಲಾಪುರದಿಂದ ಬೆಳಗಾವಿತ್ತ ಬರುತ್ತಿದ್ದ ಕಾರ್ ಟೈರ್ ಸ್ಫೋಟಗೊಂಡು ಎದುರುಗಡೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಕಾರ್ ನಲ್ಲಿದ್ದ ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಇಬ್ಬರು ಮೃತರಾಗಿದ್ದಾರೆ. ಮೃತರನ್ನು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಪಡಗಾಂವ ತಾಲೂಕಿನ ಶರಣಪೂರದ ನಂದು ಕಿಶನ್ ಕುಮಾರ್, ಮಹೇಶ್, ಅಮೂಲ್ ನೀಲೆ, ಸುರೇಶ ಕನೇರಿ, ಅಮೂಲ್ ರಮೇಶ್ ಚವರೆ, ಗೋಪಿನಾಥ್, ರವೀಂದ್ರ ವಾಡೇಕರ್ ಎಂದು ಗುರುತಿಸಲಾಗಿದೆ.