Asianet Suvarna News Asianet Suvarna News

ಕೃಷ್ಣನ ವೇಷಧಾರಿಯಾಗಿ ಮಿಂಚಿದ ಶಾಸಕ..! ವಿಡಿಯೋ ವೈರಲ್

ಲೋಕಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಶಾಸಕರು ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಇಲ್ಲೊಬ್ಬ ಶಾಸಕರು ಮಾತ್ರ ರಾಜಕೀಯ ಪಕ್ಕಕ್ಕಿಟ್ಟು, ಬಣ್ಣ ಹಚ್ಚಿ, ನಾಟಕವಾಡಿ ಗಮನ ಸೆಳೆದಿದ್ದಾರೆ. ಹೌದು ಕೋಲಾರ ಜಿಲ್ಲೆಯ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೃಷ್ಣನ ವೇಷ ಹಾಕಿ ನಾಟಕದಲ್ಲಿ ಮಿಂಚುವ ಮೂಲಕ, ರಾಜಕೀಯಕ್ಕೂ ಸೈ.. ನಟನೆಗೂ ಸೈ ಎನ್ನಿಸಿಕೊಂಡರು. ಬಂಗಾರಪೇಟೆ ಕ್ಷೇತ್ರದ ಬೂದಿಕೋಟೆಯಲ್ಲಿ ಕರಗ ಪ್ರಯುಕ್ತ ಸಾಮ್ರಾಟ್ ಸುರ್ಯೋಧನ ಎಂಬ ತೆಲುಗಿನ ಪೌರಾಣಿಕ ನಾಟಕ ಹಮ್ಮಿಕೊಳ್ಳಲಾಗಿತ್ತು.  ಶಾಸಕರು ಕೇವಲ ಎರಡೇ ದಿನಗಳ ರಿರ್ಹಸಲ್ ನಡೆಸಿ ಕೃಷ್ಣನ ವೇಷಧಾರಿಯಾಗಿ ನಾಟಕದಲ್ಲಿ ನಟಿಸಿ, ಜನರಿಂದ ಭೇಷ್ ಎನ್ನಿಸಿಕೊಂಡರು. ವಿಶೇಷವೆಂದರೆ ಶಾಸಕರ ಜೊತೆ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಸದಸ್ಯರು ಕೂಡ ನಾಟಕದಲ್ಲಿ ಅಭಿನಯಿಸಿದರು.

ಕೋಲಾರ[ಏ.28]: ಲೋಕಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಶಾಸಕರು ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಇಲ್ಲೊಬ್ಬ ಶಾಸಕರು ಮಾತ್ರ ರಾಜಕೀಯ ಪಕ್ಕಕ್ಕಿಟ್ಟು, ಬಣ್ಣ ಹಚ್ಚಿ, ನಾಟಕವಾಡಿ ಗಮನ ಸೆಳೆದಿದ್ದಾರೆ. ಹೌದು ಕೋಲಾರ ಜಿಲ್ಲೆಯ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೃಷ್ಣನ ವೇಷ ಹಾಕಿ ನಾಟಕದಲ್ಲಿ ಮಿಂಚುವ ಮೂಲಕ, ರಾಜಕೀಯಕ್ಕೂ ಸೈ.. ನಟನೆಗೂ ಸೈ ಎನ್ನಿಸಿಕೊಂಡರು. ಬಂಗಾರಪೇಟೆ ಕ್ಷೇತ್ರದ ಬೂದಿಕೋಟೆಯಲ್ಲಿ ಕರಗ ಪ್ರಯುಕ್ತ ಸಾಮ್ರಾಟ್ ಸುರ್ಯೋಧನ ಎಂಬ ತೆಲುಗಿನ ಪೌರಾಣಿಕ ನಾಟಕ ಹಮ್ಮಿಕೊಳ್ಳಲಾಗಿತ್ತು.  ಶಾಸಕರು ಕೇವಲ ಎರಡೇ ದಿನಗಳ ರಿರ್ಹಸಲ್ ನಡೆಸಿ ಕೃಷ್ಣನ ವೇಷಧಾರಿಯಾಗಿ ನಾಟಕದಲ್ಲಿ ನಟಿಸಿ, ಜನರಿಂದ ಭೇಷ್ ಎನ್ನಿಸಿಕೊಂಡರು. ವಿಶೇಷವೆಂದರೆ ಶಾಸಕರ ಜೊತೆ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಸದಸ್ಯರು ಕೂಡ ನಾಟಕದಲ್ಲಿ ಅಭಿನಯಿಸಿದರು.

Video Top Stories