ವಿಶ್ವನಾಥ್ಗೆ BJP ಆಘಾತ; ಹುಣಸೂರಿನಲ್ಲಿ ಹೊಸ ಅಭ್ಯರ್ಥಿಗೆ ಸ್ವಾಗತ?
ಅನರ್ಹ ಶಾಸಕರಿಗೆ ಶಾಕ್ ಮೇಲೆ ಶಾಕ್; ಒಂದು ಕಡೆ ಸುಪ್ರೀಂ ಕೋರ್ಟ್ ವಿಚಾರಣೆ, ಇನ್ನೊಂದು ಕಡೆ ಚುನಾವಣಾ ಆಯೋಗದಿಂದ ಉಪ-ಚುನಾವಣೆ; ಒಂದೆಡೆ ಬಿಜೆಪಿ ನಾಯಕರ ಹೇಳಿಕೆ, ಮತ್ತೊಂದೆಡೆ ಹೈಕಮಾಂಡ್ ನಡವಳಿಕೆ! ಪುತ್ರನಿಗೆ ಟಿಕೆಟ್ ಸಿಗುವ ಭರವಸೆಯಲ್ಲಿದ್ದ ವಿಶ್ವನಾಥ್ಗೆ ಆಘಾತ
ಬೆಂಗಳೂರು (ಸೆ.28): ಅನರ್ಹ ಶಾಸಕರಿಗೆ ಒಂದರ ಮೇಲೆ ಇನ್ನೊಂದು ಶಾಕ್ ಸಿಗುತ್ತಿದೆ.ಒಂದು ಕಡೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಯುತ್ತಿದೆ, ಇನ್ನೊಂದು ಕಡೆ ಚುನಾವಣಾ ಆಯೋಗದಿಂದ ಉಪ-ಚುನಾವಣೆ ದಿನಾಂಕ ಪ್ರಕಟವಾಗಿದೆ.
ಒಂದೆಡೆ ಬಿಜೆಪಿ ನಾಯಕರ ಹೇಳಿಕೆಗಳು, ಮತ್ತೊಂದೆಡೆ ಹೈಕಮಾಂಡ್ ಲೆಕ್ಕಾಚಾರ ಅನರ್ಹ ಶಾಸಕರಿಗೆ ಚಿಂತೆಗೀಡುಮಾಡಿದೆ. ಈಗಷ್ಟೇ ಜೆಡಿಎಸ್ ನಾಯಕ ಸಾ.ರಾ. ಮಹೇಶ್ ಜೊತೆ ಸೆಣಸಾಟ ಮುಗಿಸಿ, ಕದನ ವಿರಾಮದಲ್ಲಿರುವ ಎಚ್.ವಿಶ್ವನಾಥ್ಗೆ ಬಿಜೆಪಿಯಿಂದಲೇ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಹುಣಸೂರು ಕ್ಷೇತ್ರದಿಂದ ಪುತ್ರ ಅಮಿತ್ಗೆ ಟಿಕೆಟ್ ಸಿಗುವ ಭರವಸೆಯಲ್ಲಿದ್ದ ವಿಶ್ವನಾಥ್ ಈಗ ಪೇಚಿಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹುಣಸೂರಿನಿಂದ ಬಿಜೆಪಿ ಹೊಸ ಅಭ್ಯರ್ಥಿಯನ್ನು ಹುಡುಕಿದೆ. ಇಲ್ಲಿದೆ ವಿವರ...
ಇದನ್ನೂ ಓದಿ: ವಿಶ್ವನಾಥ್ಗೆ ಶಾಸ್ತಿ ; ಹುಣಸೂರಿನಲ್ಲಿ ಜೆಡಿಎಸ್ನಿಂದ ಅಚ್ಚರಿಯ ಅಭ್ಯರ್ಥಿ!