Asianet Suvarna News Asianet Suvarna News

ಬಿಜೆಪಿ ಪ್ರತಿಭಟನೆ: ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಪೊಲೀಸರ ವಶಕ್ಕೆ!

ಜಿಂದಾಲ್ಗೆ ಭೂಮಿ ನೀಡಿಕೆ ವಿರೋಧಿಸಿ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಅಹೋ ರಾತ್ರಿ ಧರಣಿ ಆರಂಭಿಸಿದ್ದರು. ಇಂದು ಭಾನುವಾರ ರ‍್ಯಾಲಿ ಮೂಲಕ ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಆನಂದರಾವ್ ಸರ್ಕಲ್‌ನಿಂದ ಹೊರಟ ಈ ರ‍್ಯಾಲಿಯನ್ನು ಶಿವಾನಂದ ಸರ್ಕಲ್ ಬಳಿಯೇ ಪೊಲೀಸರು ತಡೆದಿದ್ದಾರೆ. ಯಡಿಯೂರಪ್ಪ ಸೇರಿ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರ್. ಅಶೋಕ್‌ರನ್ನು ಹೊತ್ತುಕೊಂಡೇ ಬಂದ ಪೊಲೀಸರು ಬಸ್‌ಗೇರಿಸಿದ್ದಾರೆ. ಈ ವೇಳೆ ನಡೆದ ಎಳೆದಾಟದಲ್ಲಿ ಅವರ ಕೈಗೆ ಗಾಯಗಳಾಗಿದ್ದು, ವಾಗ್ವಾದ ಉಂಟಾಗಿದೆ.

ಬೆಂಗಳೂರು[ಜೂ.16]: ಜಿಂದಾಲ್ಗೆ ಭೂಮಿ ನೀಡಿಕೆ ವಿರೋಧಿಸಿ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಅಹೋ ರಾತ್ರಿ ಧರಣಿ ಆರಂಭಿಸಿದ್ದರು. ಇಂದು ಭಾನುವಾರ ರ‍್ಯಾಲಿ ಮೂಲಕ ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಆನಂದರಾವ್ ಸರ್ಕಲ್‌ನಿಂದ ಹೊರಟ ಈ ರ‍್ಯಾಲಿಯನ್ನು ಶಿವಾನಂದ ಸರ್ಕಲ್ ಬಳಿಯೇ ಪೊಲೀಸರು ತಡೆದಿದ್ದಾರೆ. ಯಡಿಯೂರಪ್ಪ ಸೇರಿ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರ್. ಅಶೋಕ್‌ರನ್ನು ಹೊತ್ತುಕೊಂಡೇ ಬಂದ ಪೊಲೀಸರು ಬಸ್‌ಗೇರಿಸಿದ್ದಾರೆ. ಈ ವೇಳೆ ನಡೆದ ಎಳೆದಾಟದಲ್ಲಿ ಅವರ ಕೈಗೆ ಗಾಯಗಳಾಗಿದ್ದು, ವಾಗ್ವಾದ ಉಂಟಾಗಿದೆ.

Video Top Stories