Asianet Suvarna News Asianet Suvarna News

ಗರಿಗೆದರಿದ ರಾಜ್ಯರಾಜಕಾರಣ: ರೆಬೆಲ್ ಶಾಸಕ ಮಹೇಶ್‌ ಮೈ ಸವರಿದ ಸಿಎಂ, ಡಿಸಿಎಂ

ರೆಬೆಲ್ ಶಾಸಕ ಮಹೇಶ್ ಕಮಟಳ್ಳಿ ಜತೆ ವಿಧಾನಸಭಾ ಪಾರ್ಕ್‌ನಲ್ಲಿ ಸಿಎಂ ಹಾಗೂ ಡಿಸಿಎಂ ನಡುವೆ ಬಿಸಿ-ಬಿಸಿ ಚರ್ಚೆ ನಡೆಯಿತು. ಹಾಗಾದ್ರೆ ಏನೆಲ್ಲ ಆಯ್ತು ವಿಡಿಯೋದಲ್ಲಿ ನೋಡಿ.

ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯ ರಾಜಕಾರಣ ಗರಿಗೆದರಿದ್ದು, ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡಿಸಿದೆ. ಒಂದೆಡೆ ಕಾಂಗ್ರೆಸ್ ಅತೃಪ್ತ ಶಾಸಕರು ಬಿಜೆಪಿಯತ್ತ ಒಲವು ತೋರಿಸುತ್ತಿದ್ದರೆ, ಇತ್ತ ಮೈತ್ರಿ ನಾಯಕರು ಅತೃಪ್ತರನ್ನು ಹಿಡಿದಿಟ್ಟುಕೊಳ್ಳಲು ಮಂತ್ರಿಗಿರಿ ಆಸೆ ತೋರಿಸುತ್ತಿದ್ದಾರೆ. ಅದರಲ್ಲೂ ಮಹೇಶ್ ಕಮಟಳ್ಳಿ ಚಿತ್ತ ಎತ್ತ ಎನ್ನುವುದು ಮಾತ್ರ ಮೈತ್ರಿ ನಾಯಕರಿಗೆ ಹಾಗೂ ಬಿಜೆಪಿ ನಾಯಕರಿಗೆ ತಿಳಿಯುತ್ತಿಲ್ಲ. ರಾತ್ರಿ ರಮೇಶ್ ಜಾರಕಿಹೊಳಿ ಜತೆ ಕಾಣಿಸಿಕೊಂಡ್ರೆ, ಬೆಳಗ್ಗೆ ಕಾಂಗ್ರೆಸ್ ಪರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂದು ಸಹ ಸಿಎಂ ಡಿಸಿಎಂ ಹಾಗೂ ಕುಮಟಳ್ಳಿ ಜೊತೆ ಬಿಸಿ-ಬಿಸಿ ಚರ್ಚೆ ನಡೆಯಿತು.

Video Top Stories