Asianet Suvarna News Asianet Suvarna News

ರಾಜೀನಾಮೆ ಅಂಗೀಕರಿಸಿ, ಇಲ್ಲಾಂದ್ರೆ..... ದಳಪತಿಗಳಿಗೆ ವಿಶ್ವನಾಥ್ ವಾರ್ನಿಂಗ್!

ಕಾಟಗಳ ಸುಳಿಯಲ್ಲಿ ಮೈತ್ರಿಕೂಟ- ಒಂದೆಡೆ ಬಂಡಾಯ, ಇನ್ನೊಂದೆಡೆ ರಾಜೀನಾಮೆ; ತೀವ್ರ ಸ್ವರೂಪಕ್ಕೆ ತಿರುಗಿದ ವಿಶ್ವನಾಥ್ ರಾಜೀನಾಮೆ ವಿಚಾರ; ರಾಜೀನಾಮೆ ಅಂಗೀಕರಿಸಿ ಇಲ್ಲದಿದ್ದರೆ.... ದಳಪತಿಗಳಿಗೇ ಕುಕ್ಕಿದ ಹಳ್ಳಿ ಹಕ್ಕಿ!   

ಬೆಂಗಳೂರು: ಕಾಟಗಳ ಸುಳಿಯಲ್ಲಿ ಮೈತ್ರಿಕೂಟ ನರಳಾಡುತ್ತಿದೆ. ಒಂದೆಡೆ ಅತೃಪ್ತರ ಕಾಟವಾದರೆ, ಇನ್ನೊಂದೆಡೆ ‘ನಿಷ್ಠಾವಂತರ’ ಕಾಟ! ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ರಾಜೀನಾಮೆ ವಿಚಾರವು ಈಗ ತೀವ್ರ ಸ್ವರೂಪಕ್ಕೆ ತಿರುಗಿದೆ.

ರಾಜ್ಯಾಧ್ಯಕ್ಷ ಹುದ್ದೆಗೆ ನೀಡಿರುವ ರಾಜೀನಾಮೆ ಅಂಗೀಕರಿಸಿ, ಇಲ್ಲದಿದ್ದರೆ ಮುಂದೇನು ಮಾಡ್ತೀನಿ ಎಂಬುವುದನ್ನು ವಿಶ್ವನಾಥ್ ಮಾಧ್ಯಮಗಳ ಮುಂದೆ ದಳಪತಿಗಳನ್ನು ಎಚ್ಚರಿಸಿದರು. ವಿಶ್ವನಾಥ್  ಇತ್ತೀಚಿಗಿನ  ಹೇಳಿಕೆ ಮತ್ತು ನಡೆಗಳು ರಾಜ್ಯರಾಜಕಾರಣದಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ಸಚಿವ ಸಾ.ರಾ. ಮಹೇಶ್ ವಿರುದ್ಧ ವಿಶ್ವನಾಥ್ ಬಹಿರಂಗವಾಗಿ ಟೀಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಮನವೊಲಿಸುವ ಪ್ರಯತ್ನ ಮಾಡಿದರೂ, ವಿಶ್ವನಾಥ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.  

Video Top Stories