ಉತ್ತಮ ಕೆಲಸವೇ ನಮ್ಮನ್ನು ಕಾಯೋದು: ಸಿಎಂಗೆ ಮಾತಲ್ಲೇ ಕುಟುಕಿದ ಕುಮಾರಸ್ವಾಮಿ
ಬಿ. ಎಸ್. ಯಡಿಯೂರಪ್ಪ ವಿಶ್ವಾಸಮತ ಸಾಬೀತುಪಡಿಸಿದ ಬೆನ್ನಲ್ಲೇ ಸದನದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಗೆ ಮತ್ತೆ ಮಾತಲ್ಲೇ ಕುಟುಕಿದ್ದಾರೆ. ತಮ್ಮ ವಿರುದ್ಧ ಆರೋಪ ಮಾಡಿದ ಬಿಜೆಪಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ ಕೇವಲ ಬಾಯಿ ಚಪಲಕ್ಕೆ ಆಧಾರರಹಿತ ಆರೋಪ ಶೋಭೆ ತರಲ್ಲ ಅದನ್ನು ಸಾಬೀತುಪಡಿಸಿ ಎಂದು ಸವಾಲೆಸೆದಿದ್ದಾರೆ. ಅಲ್ಲದೇ ರೈತರ ಸಾಲಮನ್ನಾ ಬಗ್ಗೆ ಅತ್ಯಂತ ಪ್ರಮಾಣಿಕವಾಗಿ ತೀರ್ಮಾನ ಮಾಡಿದ್ದೇನೆ. ಸಾಲಮನ್ನಾ ವಿಷಯದಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಕಡತದಲ್ಲಿದೆ ಎನ್ನುವ ಮೂಲಕ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು[ಜು.29]: ಬಿ. ಎಸ್. ಯಡಿಯೂರಪ್ಪ ವಿಶ್ವಾಸಮತ ಸಾಬೀತುಪಡಿಸಿದ ಬೆನ್ನಲ್ಲೇ ಸದನದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಗೆ ಮತ್ತೆ ಮಾತಲ್ಲೇ ಕುಟುಕಿದ್ದಾರೆ. ತಮ್ಮ ವಿರುದ್ಧ ಆರೋಪ ಮಾಡಿದ ಬಿಜೆಪಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ ಕೇವಲ ಬಾಯಿ ಚಪಲಕ್ಕೆ ಆಧಾರರಹಿತ ಆರೋಪ ಶೋಭೆ ತರಲ್ಲ ಅದನ್ನು ಸಾಬೀತುಪಡಿಸಿ ಎಂದು ಸವಾಲೆಸೆದಿದ್ದಾರೆ. ಅಲ್ಲದೇ ರೈತರ ಸಾಲಮನ್ನಾ ಬಗ್ಗೆ ಅತ್ಯಂತ ಪ್ರಮಾಣಿಕವಾಗಿ ತೀರ್ಮಾನ ಮಾಡಿದ್ದೇನೆ. ಸಾಲಮನ್ನಾ ವಿಷಯದಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಕಡತದಲ್ಲಿದೆ ಎನ್ನುವ ಮೂಲಕ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.