Asianet Suvarna News Asianet Suvarna News

ದೇವೇಗೌಡ್ರಿಗೆ ಸಿದ್ದರಾಮಯ್ಯ ಮೇಲೆ ಸಿಟ್ಟಿದೆಯಾ? ಪ್ರಶ್ನೆಗೆ ದಿನೇಶ್ ಕೊಟ್ರು ನೇರ ಉತ್ತರ!

ರಾಜ್ಯದ ಹಾಲಿ ರಾಜಕೀಯ ಸನ್ನಿವೇಶದಲ್ಲಿ ಎಚ್.ಡಿ. ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧವನ್ನು ವಿವರಿಸುವುದು ಬಹಳ ಕ್ಲಿಷ್ಟಕರ ವಿಚಾರ.  ಪತ್ರಕರ್ತರು ಈ ಬಗ್ಗೆ  ಕಾಂಗ್ರೆಸ್ ಅಧ್ಯಕ್ಷರಿಗೆ ನೇರ ಪ್ರಶ್ನೆ ಕೇಳಿಬಿಟ್ರು! ಅವರ ಉತ್ತರ ಏನಿದೆ ನೋಡಿ...

ಬೆಂಗಳೂರು (ಜೂ.21): ಒಂದೆಡೆ ಅತೃಪ್ತರ ಕಾಟ, ಇನ್ನೊಂದೆಡೆ ಮೈತ್ರಿ ನಾಯಕರ ನಡುವೆ ಹದಗೆಡುತ್ತಿರುವ ಸಂಬಂಧಗಳು... ಇವುಗಳ ನಡುವೆ ಸಿಕ್ಕಿ ಅಪ್ಪಚ್ಚಿಯಾಗುವ ಸ್ಥಿತಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್‌ರದ್ದು.

ಅತ್ತ ಲೋಕಸಭೆ ಚುನಾವಣೆ ಸೋಲಿಗೆ ಸಿದ್ದರಾಮಯ್ಯ ಜೆಡಿಎಸ್ ಮೇಲೆ ಗೂಬೆ ಕೂರಿಸಿದರೆ, ಇತ್ತ ಜೆಡಿಎಸ್ ವರಿಷ್ಠ ದೇವೇಗೌಡರು ಮಧ್ಯಂತರ ಚುನಾವಣೆ ಎಂಬ ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆ. 

ಈ ವಿದ್ಯಮಾನಗಳ ಕುರಿತು ದಿನೇಶ್ ಗುಂಡೂರಾವ್ ಮಾದ್ಯಮಗಳೊಂದಿಗೆ ವಿವರವಾಗಿ ಮಾತನಾಡಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ, ಸಿದ್ದರಾಮಯ್ಯ ಮತ್ತು ದೇವೇಗೌಡರ ಹೇಳಿಕೆ ಮತ್ತು ಪ್ರತಿ-ಹೇಳಿಕೆಗಳ ಬಗ್ಗೆ ದಿನೇಶ್ ಜಾಣಪ್ರತಿಕ್ರಿಯೆ ಹೀಗಿದೆ.... 

Video Top Stories