Asianet Suvarna News Asianet Suvarna News

ಕಾಂಗ್ರೆಸ್ ಮುಖಂಡನ ಭೂಗಳ್ಳತನ : 410 ಎಕರೆ ನುಂಗಿದ ನಾಯಕ

ಅಂದು ತುಂಡು ಭೂಮಿಯೂ ಇಲ್ಲವೆಂದು ಸರ್ಕಾರಿ ಭೂಮಿ ಪಡೆದಿದ್ದ ಕಾಂಗ್ರೆಸ್ ನಾಯಕ ಇಂದು ಬರೋಬ್ಬರಿ 410 ಎಕರೆ ಒಡೆಯ. ಕಾಂಗ್ರೆಸ್  ಮುಖಂಡ KH  ಮುನಿಯಪ್ಪ ಬೇನಾಮಿ ಹೆಸರಿನಲ್ಲಿ ಸರ್ಕಾರಿ ಭೂಮಿಯನ್ನು ಗುಳುಂ ಮಾಡಿದ ಸ್ಟೋರಿಯನ್ನು ಬಯಲು ಮಾಡಿದೆ ಸುವರ್ಣ ನ್ಯೂಸ್.

7 ಬಾರಿ ಸಂಸದರಾಗಿ ಆಯ್ಕೆಯಾಗಿರುವ K.H.ಮುನಿಯಪ್ಪ ಭಾರೀ ಭೂಗಳ್ಳತನ ಮಾಡಿದ್ದು, ಒಂದೇ ಊರಿನಲ್ಲಿ 410 ಎಕರೆ ಒಡೆಯರಾಗಿದ್ದಾರೆ. ಸರ್ಕಾರದಿಂದ 4 ಎಕರೆ ಪಡೆದುಕೊಂಡಿದ್ದ ನಾಯಕ ತಮ್ಮ ಜಮೀನನ್ನು ನೂರಾರು ಪಟ್ಟು ವಿಸ್ತರಿಸಿಕೊಂಡಿದ್ದಾರೆ. 

2005 , 2006ರಲ್ಲಿ ಸೋದರರು, ಪತ್ನಿ, ಮಕ್ಕಳ ಹೆಸರಲ್ಲಿ 83 ಎಕರೆ ಖರೀದಿಸಿದ್ದ ಸಂಸದ,  ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಗೊರಮಿಳ್ಳಹಳ್ಳಿಯಲ್ಲಿಯೂ ಇದೀಗ ಜಮೀನು ಹೊಂದಿದ್ದಾರೆ. 

ಲೋಕಸಭಾ ಚುನಾವಣೆ ಸಮೀಪಿಸಿದ ಈ ವೇಳೆ ಆಯೋಗದ ಮುಂದೆ ಆಸ್ತಿ ಘೋಷಣೆ ಮಾಡಿಕೊಳ್ಳದ ಮುನಿಯಪ್ಪ, ಅಫಿಡವಿಟ್ನಲ್ಲಿ ತಮ್ಮ ಮತ್ತು ಪತ್ನಿ ಹೆಸರಿನ ಜಮೀನಿನ ಬಗ್ಗೆ ಮಾತ್ರವೇ ಮಾಹಿತಿ ನೀಡಿದ್ದಾರೆ.  ಮುನಿಯಪ್ಪ ಭೂಗಳ್ಳತನದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. 

ಅಂದು ತುಂಡು ಭೂಮಿಯೂ ಇಲ್ಲವೆಂದು ಸರ್ಕಾರಿ ಭೂಮಿ ಪಡೆದಿದ್ದ ಕಾಂಗ್ರೆಸ್ ನಾಯಕ ಇಂದು ಬರೋಬ್ಬರಿ 410 ಎಕರೆ ಒಡೆಯ. ಕಾಂಗ್ರೆಸ್  ಮುಖಂಡ KH  ಮುನಿಯಪ್ಪ ಬೇನಾಮಿ ಹೆಸರಿನಲ್ಲಿ ಸರ್ಕಾರಿ ಭೂಮಿಯನ್ನು ಗುಳುಂ ಮಾಡಿದ ಸ್ಟೋರಿಯನ್ನು ಬಯಲು ಮಾಡಿದೆ ಸುವರ್ಣ ನ್ಯೂಸ್.

7 ಬಾರಿ ಸಂಸದರಾಗಿ ಆಯ್ಕೆಯಾಗಿರುವ K.H.ಮುನಿಯಪ್ಪ ಭಾರೀ ಭೂಗಳ್ಳತನ ಮಾಡಿದ್ದು, ಒಂದೇ ಊರಿನಲ್ಲಿ 410 ಎಕರೆ ಒಡೆಯರಾಗಿದ್ದಾರೆ. ಸರ್ಕಾರದಿಂದ 4 ಎಕರೆ ಪಡೆದುಕೊಂಡಿದ್ದ ನಾಯಕ ತಮ್ಮ ಜಮೀನನ್ನು ನೂರಾರು ಪಟ್ಟು ವಿಸ್ತರಿಸಿಕೊಂಡಿದ್ದಾರೆ. 

2005 , 2006ರಲ್ಲಿ ಸೋದರರು, ಪತ್ನಿ, ಮಕ್ಕಳ ಹೆಸರಲ್ಲಿ 83 ಎಕರೆ ಖರೀದಿಸಿದ್ದ ಸಂಸದ,  ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಗೊರಮಿಳ್ಳಹಳ್ಳಿಯಲ್ಲಿಯೂ ಇದೀಗ ಜಮೀನು ಹೊಂದಿದ್ದಾರೆ. 

ಲೋಕಸಭಾ ಚುನಾವಣೆ ಸಮೀಪಿಸಿದ ಈ ವೇಳೆ ಆಯೋಗದ ಮುಂದೆ ಆಸ್ತಿ ಘೋಷಣೆ ಮಾಡಿಕೊಳ್ಳದ ಮುನಿಯಪ್ಪ, ಅಫಿಡವಿಟ್ನಲ್ಲಿ ತಮ್ಮ ಮತ್ತು ಪತ್ನಿ ಹೆಸರಿನ ಜಮೀನಿನ ಬಗ್ಗೆ ಮಾತ್ರವೇ ಮಾಹಿತಿ ನೀಡಿದ್ದಾರೆ.  ಮುನಿಯಪ್ಪ ಭೂಗಳ್ಳತನದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.