Asianet Suvarna News Asianet Suvarna News

ಲೋಕಸಭಾ ಎಲೆಕ್ಷನ್ ಮೂಡ್‌ನಿಂದ ಹೊರಬಂದ ಸಿಎಂ, ಮೇ 9ಕ್ಕೆ ಸಚಿವ ಸಂಪುಟ ಸಭೆ

ರಾಜ್ಯದಲ್ಲಿ ಲೋಕ ಕದನ ಮುಗಿಯುತ್ತಿದ್ದಂತೆಯೇ ಸಚಿವ ಸಂಪುಟ ಸಭೆ ಕರೆದ ಕುಮಾರಸ್ವಾಮಿ..!

ರಾಜ್ಯದಲ್ಲಿ ಲೋಕಸಭಾ ಚುನಾವಣಾ ಭರಾಟೆ ಮುಗಿದ ಬಳಿಕ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತದತ್ತ ಗಮನ ಹರಿಸಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪ್ರಕೃತಿ ಚಿಕಿತ್ಸೆ, ಪೂಜೆ ಹವನ- ಹೋಮ , ಕಂಟಕ ನಿವಾರಣೆ ಬಳಿಕ ಆಡಳಿತಕ್ಕೆ ಗಮನ ನೀಡಲು ಮುಂದಾಗಿದ್ದು, ಇದೇ ಮೇ 9ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವ ಸಂಪುಟ ಸಭೆ ಕರೆದಿದ್ದಾರೆ.