ಲೋಕಸಭಾ ಎಲೆಕ್ಷನ್ ಮೂಡ್ನಿಂದ ಹೊರಬಂದ ಸಿಎಂ, ಮೇ 9ಕ್ಕೆ ಸಚಿವ ಸಂಪುಟ ಸಭೆ
ರಾಜ್ಯದಲ್ಲಿ ಲೋಕ ಕದನ ಮುಗಿಯುತ್ತಿದ್ದಂತೆಯೇ ಸಚಿವ ಸಂಪುಟ ಸಭೆ ಕರೆದ ಕುಮಾರಸ್ವಾಮಿ..!
ರಾಜ್ಯದಲ್ಲಿ ಲೋಕಸಭಾ ಚುನಾವಣಾ ಭರಾಟೆ ಮುಗಿದ ಬಳಿಕ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತದತ್ತ ಗಮನ ಹರಿಸಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪ್ರಕೃತಿ ಚಿಕಿತ್ಸೆ, ಪೂಜೆ ಹವನ- ಹೋಮ , ಕಂಟಕ ನಿವಾರಣೆ ಬಳಿಕ ಆಡಳಿತಕ್ಕೆ ಗಮನ ನೀಡಲು ಮುಂದಾಗಿದ್ದು, ಇದೇ ಮೇ 9ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವ ಸಂಪುಟ ಸಭೆ ಕರೆದಿದ್ದಾರೆ.