ಡಿಕೆಶಿಗೆ ಬಂಡಾಯ ಶಾಸಕನ ‘ಪ್ರೀತಿಯ’ ಮನವಿ!
ಗನ್ ತಂದಿಲ್ಲ, ಹೃದಯ ತಂದಿದ್ದೇನೆ, ಭೇಟಿಯಾಗಿಯೇ ಹೋಗ್ತೀನಿ ಎಂದು ಬಂಡಾಯ ಶಾಸಕರು ಬೀಡು ಬಿಟ್ಟಿರುವ ಮುಂಬೈ ಹೋಟೆಲ್ ಹೊರಗಡೆ ಡಿ.ಕೆ. ಶಿವಕುಮಾರ್ ಝಾಂಡಾ ಊರಿ ಕೂತಿದ್ದಾರೆ. ಡಿಕೆಶಿಯ ಈ ನಡೆ ಅವರ ಆಪ್ತ ಶಾಸಕರಿಗೆ ಕಸಿವಿಸಿ ಉಂಟುಮಾಡಿದೆ. ರಾಜಕಾರಣ ಬೇರೆ, ಸ್ನೇಹ ಬೇರೆ ಎಂದು ಹೇಳುತ್ತಿರುವ ಶಾಸಕರು ಡಿಕೆಶಿಗೆ ‘ಪ್ರೀತಿ’ಯಿಂದಲೇ ಮನವಿ ಮಾಡಿದ್ದಾರೆ.
ಮುಂಬೈ (ಜು.10): ಗನ್ ತಂದಿಲ್ಲ, ಹೃದಯ ತಂದಿದ್ದೇನೆ, ಭೇಟಿಯಾಗಿಯೇ ಹೋಗ್ತೀನಿ ಎಂದು ಬಂಡಾಯ ಶಾಸಕರು ಬೀಡು ಬಿಟ್ಟಿರುವ ಮುಂಬೈ ಹೋಟೆಲ್ ಹೊರಗಡೆ ಡಿ.ಕೆ. ಶಿವಕುಮಾರ್ ಝಾಂಡಾ ಊರಿ ಕೂತಿದ್ದಾರೆ. ಡಿಕೆಶಿಯ ಈ ನಡೆ ಅವರ ಆಪ್ತ ಶಾಸಕರಿಗೆ ಕಸಿವಿಸಿ ಉಂಟುಮಾಡಿದೆ. ರಾಜಕಾರಣ ಬೇರೆ, ಸ್ನೇಹ ಬೇರೆ ಎಂದು ಹೇಳುತ್ತಿರುವ ಶಾಸಕರು ಡಿಕೆಶಿಗೆ ‘ಪ್ರೀತಿ’ಯಿಂದಲೇ ಮನವಿ ಮಾಡಿದ್ದಾರೆ.