Asianet Suvarna News Asianet Suvarna News

ಗ್ರಾಮ ವಾಸ್ತವ್ಯ ಮಾಡಿದ್ದು ಸಿಎಂ, ಆ ಬಗ್ಗೆ ಪುಸ್ತಕ ಬಿಡುಗಡೆ ಮಾಡಿದ್ದು ಬಿಜೆಪಿ!

ಸಿಎಂ ಎಚ್.ಡಿ. ಕುಮಾರಸ್ವಾಮಿ ಯಾದಗಿರಿ ಜಿಲ್ಲೆಯ ಚಂಡರಗಿ ಊರಿನಲ್ಲಿ ಗ್ರಾಮ ವಾಸ್ತವ್ಯ ಮುಗಿಸಿ, ಇನ್ನೊಂದು ಗ್ರಾಮ ವಾಸ್ತವ್ಯಕ್ಕೆ ಸಿದ್ಧರಾಗುತ್ತಿದ್ದಾರೆ. ಸಿಎಂ ಗ್ರಾಮವಾಸ್ತವ್ಯ ಬಗ್ಗೆ ರಾಜ್ಯ ಬಿಜೆಪಿಯು ಪುಸ್ತಕ ಬಿಡುಗಡೆ ಮಾಡಿದೆ. 

ಬೆಂಗಳೂರು (ಜೂ.24): ಸಿಎಂ ಎಚ್.ಡಿ. ಕುಮಾರಸ್ವಾಮಿ ಒಂದು ಗ್ರಾಮ ವಾಸ್ತವ್ಯ ಮುಗಿಸಿ, ಇನ್ನೊಂದಕ್ಕೆ ಸಿದ್ಧರಾಗುತ್ತಿದ್ದಾರೆ. ಇನ್ನೊಂದು ಕಡೆ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಬಗ್ಗೆ ರಾಜ್ಯ ಬಿಜೆಪಿಯು ಪುಸ್ತಕ ಬಿಡುಗಡೆ ಮಾಡಿದೆ.

ಗ್ರಾಮ ವಾಸ್ತವ್ಯವನ್ನು ಟೀಕಿಸಿ ಸಿದ್ಧಪಡಿಸಲಾಗಿರುವ ಪುಸ್ತಕವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ‘ಗ್ರಾಮ ವಾಸ್ತವ್ಯ ಶೂನ್ಯ ಸಾಧನೆ’ ಎಂಬ ಈ ಪುಸ್ತಕದಲ್ಲಿ ಬಿಜೆಪಿಯು ಸಿಎಂಗೆ 10 ಪ್ರಶ್ನೆಗಳನ್ನು ಕೇಳಿದೆ.

ಕಳೆದ ವಾರ ಸಿಎಂ ಯಾದಗಿರಿ ಜಿಲ್ಲೆಯ ಚಂಡರಗಿ ಊರಿನಲ್ಲಿ ಗ್ರಾಮವಾಸ್ತವ್ಯ ಹೂಡಿದ್ದರು. ಇದೇ ಜೂ.26ಕ್ಕೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕರಿಯಗುಡ್ಡ  ಎಂಬ ಊರಿನಲ್ಲಿ ಸಿಎಂ ಮುಂದಿನ ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದ್ದಾರೆ.