Asianet Suvarna News Asianet Suvarna News

ಬೆಸ್ಕಾಂ ಅಧಿಕಾರಿಗಳ ಬೇಜಾವಾಬ್ದಾರಿ ಮತ್ತೊಬ್ಬ ಬಾಲಕನ ಪ್ರಾಣಕ್ಕೆ ಕುತ್ತು

ಎರಡು ದಿನದ ಹಿಂದೆ ವಿದ್ಯುತ್ ತಂತಿ ತಗುಲಿ ವಿಕ್ರಮ್ ಅನ್ನೋ ಬಾಲಕ ಮೃತಪಟ್ಟಿದ್ದ. ಇದೀಗ ಮತ್ತೊಂದು ಘಟನೆ ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದಿದೆ. 9 ವರ್ಷದ ಬಾಲಕ ಸಾಯಿ ಚರಣ್ ಸದ್ಯ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿರುವ ಬಾಲಕ. ಶುಕ್ರವಾರ ಸಂಜೆ 7:35ಕ್ಕೆ ಮಕ್ಕಳು ರಸ್ತೆಬದಿ ಆಟವಾಡುವಾಗ, ಸಾಯಿ ಚರಣ್ ಗೆ ಫುಟ್ಪಾತ್ ಮೇಲಿನ ಕಂಬಿಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ತಗುಲಿದೆ. ಕರೆಂಟ್ ಹೊಡೆದ ಮಗು ಸ್ಥಿತಿ ಗಂಭೀರವಾಗಿದೆ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.  ಸದ್ಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 24 ಗಂಟೆ ಮಗುವನ್ನು ಅಬ್ಸರ್ವೇಷನ್ ನಲ್ಲಿ ಇಡಲಾಗಿದೆ. ಮಹಾಲಕ್ಷ್ಮಿ ಲೇಔಟ್ ನ ನಾಗಮ್ಮ ನಾಗಲಿಂಗೇಶ್ವರ ದೇವಸ್ಥಾನದ ಎದುರಿನ ರಸ್ತೆ 7 ನೇ ಅಡ್ಡರಸ್ತೆಯಲ್ಲಿ ಘಟನೆ ನಡೆದಿದೆ

ಬೆಂಗಳೂರು[ಏ.27]: ಎರಡು ದಿನದ ಹಿಂದೆ ವಿದ್ಯುತ್ ತಂತಿ ತಗುಲಿ ವಿಕ್ರಮ್ ಅನ್ನೋ ಬಾಲಕ ಮೃತಪಟ್ಟಿದ್ದ. ಇದೀಗ ಮತ್ತೊಂದು ಘಟನೆ ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದಿದೆ. 9 ವರ್ಷದ ಬಾಲಕ ಸಾಯಿ ಚರಣ್ ಸದ್ಯ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿರುವ ಬಾಲಕ. ಶುಕ್ರವಾರ ಸಂಜೆ 7:35ಕ್ಕೆ ಮಕ್ಕಳು ರಸ್ತೆಬದಿ ಆಟವಾಡುವಾಗ, ಸಾಯಿ ಚರಣ್ ಗೆ ಫುಟ್ಪಾತ್ ಮೇಲಿನ ಕಂಬಿಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ತಗುಲಿದೆ. ಕರೆಂಟ್ ಹೊಡೆದ ಮಗು ಸ್ಥಿತಿ ಗಂಭೀರವಾಗಿದೆ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.  ಸದ್ಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 24 ಗಂಟೆ ಮಗುವನ್ನು ಅಬ್ಸರ್ವೇಷನ್ ನಲ್ಲಿ ಇಡಲಾಗಿದೆ. ಮಹಾಲಕ್ಷ್ಮಿ ಲೇಔಟ್ ನ ನಾಗಮ್ಮ ನಾಗಲಿಂಗೇಶ್ವರ ದೇವಸ್ಥಾನದ ಎದುರಿನ ರಸ್ತೆ 7 ನೇ ಅಡ್ಡರಸ್ತೆಯಲ್ಲಿ ಘಟನೆ ನಡೆದಿದೆ