Asianet Suvarna News Asianet Suvarna News

ರೈತ ಕೇಳಿದ್ದು ನೆರೆ ಪರಿಹಾರ, ಸಿಕ್ಕಿದ್ದು ಪೊಲೀಸ್ ‘ಉಪಚಾರ’

ನೆರೆ ಪರಿಹಾರ ಪರಿಶೀಲನೆಗೆ ಬೆಳಗಾವಿಗೆ ತೆರಳಿರುವ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಪ್ರತಿಭಟನೆಯ ಬಿಸಿ ತಾಗಿದೆ. ಸಿಎಂ ಕಾಟಾಚಾರಕ್ಕಾಗಿ ಅಹವಾಲು ಸ್ವೀಕರಿಸುತ್ತಿದ್ದಾರೆ ಎಂದು ಆರೋಪಿಸಿದ ರೈತರು, ರಾಜ್ಯದ 25 ಸಂಸದರು ಸತ್ತಿದ್ದಾರೆ, ಎಂದು ಆಕ್ರೋಶ ವ್ಯಕ್ತಪಡಿಸಿದರು. ನೆರೆ ಪರಿಹಾರ ಕೊಡಲು ಸರ್ಕಾರ ವಿಫಲವಾಗಿದೆ ಎಂದು ರೈತರು ಸಿಎಂಗೆ ಘೇರಾವ್ ಹಾಕಲು ಮುಂದಾಗಿದ್ದಾರೆ. ಆ ವೇಳೆ, ಪ್ರತಿಭಟನಾನಿರತ ರೈತರನ್ನು ಬಂಧಿಸಿರುವ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ಬೆಳಗಾವಿ (ಅ.04): ನೆರೆ ಪರಿಹಾರ ಪರಿಶೀಲನೆಗೆ ಬೆಳಗಾವಿಗೆ ತೆರಳಿರುವ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಪ್ರತಿಭಟನೆಯ ಬಿಸಿ ತಾಗಿದೆ.

ಸಿಎಂ ಕಾಟಾಚಾರಕ್ಕಾಗಿ ಅಹವಾಲು ಸ್ವೀಕರಿಸುತ್ತಿದ್ದಾರೆ ಎಂದು ಆರೋಪಿಸಿದ ರೈತರು, ರಾಜ್ಯದ 25 ಸಂಸದರು ಸತ್ತಿದ್ದಾರೆ, ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನೆರೆ ಪರಿಹಾರ ಕೊಡಲು ಸರ್ಕಾರ ವಿಫಲವಾಗಿದೆ ಎಂದು ರೈತರು ಸಿಎಂಗೆ ಘೇರಾವ್ ಹಾಕಲು ಮುಂದಾಗಿದ್ದಾರೆ. ಆ ವೇಳೆ, ಪ್ರತಿಭಟನಾನಿರತ ರೈತರನ್ನು ಬಂಧಿಸಿರುವ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.