Asianet Suvarna News Asianet Suvarna News

ಹಲಾಲ್‌ ಮುಕ್ತ ದೀಪಾವಳಿಗೆ ಮಂಡ್ಯದಲ್ಲಿ ಶುರುವಾಯ್ತು ಅಭಿಯಾನ

ಬೆಂಗಳೂರು ಆಯಿತು, ಇದೀಗ ಜಿಲ್ಲೆ-ಜಿಲ್ಲೆಗೂ ಧರ್ಮದ ಜ್ವಾಲೆ ಮುಂದುವರೆದಿದ್ದು, ಮಂಡ್ಯದಲ್ಲಿ ಮತ್ತೊಂದು ಧರ್ಮ ದಂಗಲ್‌ಗೆ ವೇದಿಕೆ ಸಿದ್ಧವಾಗಿದೆ. ಭಜರಂಗದಳ ಸೇನೆಯಿಂದ ಮಂಡ್ಯದ ಸಿಲ್ವರ್ ಜುಬ್ಲಿ ಪಾರ್ಕ್‌ನಲ್ಲಿ ಹಲಾಲ್ ಬಾಯ್ಕಟ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ತಿಂಗಳುಗಳ ಹಿಂದೆ ಆವರಿಸಿದ್ದ ಹಲಾಲ್ ಉತ್ಪಾದನೆಗಳ ನಿಷೇಧ ಅಭಿಯಾನ ಪುನಃ ಶುರುವಾಗಿದ್ದು, ಮಂಡ್ಯದಲ್ಲಿ ಮನೆ-ಮನೆಗಳಿಗೆ ತೆರಳಿ ಹಲಾಲ್ ವಿರೋಧಿ ಜಾಗೃತಿ ಮೂಡಿಸಲಾಗುತ್ತಿದೆ. ಹಲಾಲ್ ಮಾರ್ಕ್ ವಸ್ತುಗಳನ್ನು ಖರೀದಿ ಮಾಡದಂತೆ ಮನವಿ ಸಲ್ಲಿಸಲಾಗುತ್ತಿದೆ. ಭಜರಂಗದಳ  ಸೇನೆಯ ಮಂಜುನಾಥ್ ನೇತೃತ್ವದಲ್ಲಿ 98 ಹಲಾಲ್‌ ಪ್ರಾಡಕ್ಟ್ ಗಳನ್ನು ನಿಷೇದಿಸುವಂತೆ ಆಗ್ರಹ ಮಾಡಲಾಗಿದೆ. 

Video Top Stories