Asianet Suvarna News Asianet Suvarna News

ಮಂಗಳೂರು ಕಮಿಷನರ್‌ ಸಂಗೀತ ಸುಧೆಗೆ ಕೇಳುಗರು ಫಿದಾ, ಖಾಕಿಯೊಳಗಿನ ಸಂಗೀತ ಪ್ರೇಮ!

-  ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸಂಗೀತ ಪ್ರೇಮಿಯೂ ಹೌದು

- ಪಾಂಡೇಶ್ವರ ಬ್ರಹ್ಮ ಕಲಶೋತ್ಸವದಲ್ಲಿ ಭಕ್ತಿಗೀತೆ ಹಾಡಿ ಗಮನ ಸೆಳೆದಿದ್ದಾರೆ. 

- ನೀರಿನಲ್ಲಿ ಅಲೆಯ ಉಂಗುರ.... ಗೀತಾಂಜಲಿ...  ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 
 

ಮಂಗಳೂರು (ಜೂ. 19):  ಪೊಲೀಸ್ ಕಮಿಷನರ್ ಶಶಿಕುಮಾರ್ ಖಡಕ್ ಕಾಪ್ ಎಂದೇ ಹೆಸರು ಪಡೆದಿದ್ದಾರೆ. ಖಡಕ್ ಆಫೀಸರ್ ಅಷ್ಟೇ ಅಲ್ಲ, ಇವರು ಸಂಗೀತ ಪ್ರೇಮಿಯೂ ಹೌದು. ಇತ್ತೀಚಿಗೆ ಮಂಗಳೂರಿನ ಪಾಂಡೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವದಲ್ಲಿ  ಭಕ್ತಿಗೀತೆ ಹಾಡಿ ಗಮನ ಸೆಳೆದಿದ್ಧಾರೆ.

'ಬೆಂಗಳೂರನ್ನು ಬೈಯಬೇಡಿ' ಕೊರೋನಾ ಎಂದು ಓಡಿಹೋದವರಿಗೆ ಉಪ್ಪು-ಹುಳಿ- ಖಾರ!

ಆಗಾಗ ಹಾಡಿನ ತುಣುಕುಗಳನ್ನು ಆಗಾಗ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಶಶಿಕುಮಾರ್,  ನಟ ಪೃಥ್ವಿ ಅಂಬರ್ ಜೊತೆ ಹಾಡಿದ ದಿಯಾ ಚಿತ್ರದ 'ಹಾಯಾದ ಹಾಯಾದ ನನ್ನ ಪುಟ್ಟ ಲೋಕ ನೀನೆ ಅಲ್ಲವೇ' ಹಾಡು ವೈರಲ್ ಆಗಿದೆ. ಶಶಿಕುಮಾರ್ ಹಾಡಿರುವ ಹಾಡಿನ ತುಣುಕುಗಳು ಇಲ್ಲಿವೆ ನೋಡಿ.