ಮಂಡ್ಯದಲ್ಲಿ ಮತ್ತೆ ಬಸ್ ದುರಂತ: ಪ್ರವಾಸಿ ಬಸ್ ಪಲ್ಟಿ!
ಕನಗನಮರಡಿ ಬಸ್ ದುರಂತದ ನಂತರ ಮಂಡ್ಯದಲ್ಲಿ ಮತ್ತೊಂದು ಅವಘಡ| ಮದ್ದೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಖಾಸಗಿ ಬಸ್| ಕೊಲ್ಕತ್ತಾದಿಂದ ಪ್ರವಾಸಕ್ಕೆಂದು ಬಂದಿದ್ದ 65 ಪ್ರಯಾಣಿಕರು| ಸುಮಾರು 40 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ, ಆಸ್ಪತ್ರೆಯಗೆ ದಾಖಲು|
ಮಂಡ್ಯ(ಮಾ.03): ಕಳೆದ ವರ್ಷ ನವೆಂಬರ್ ನಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರದ ಕನಗನಮರಡಿಯಲ್ಲಿ ಬಸ್ ಕಾಲುವೆಗೆ ಉರುಳಿ ಹಲವಾರು ಜನರು ಪ್ರಾಣ ಬಿಟ್ತ ಘಟನೆ ಇನ್ನೂ ಹಸಿಯಾಗಿರುವಾಗಲೇ ಮಂಡ್ಯದಲ್ಲಿ ಇನ್ನೊಂದು ಬಸ್ ದುರಂತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಹ್ಜನರಿಗೆ ಗಾಯಗಳಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..