‘ಮೈಯಲ್ಲಿರೋ ರಕ್ತದಲ್ಲಿ ನಿಮ್ಮ ಕಾಲು ತೊಳೆದ್ರೂ ಕಮ್ಮಿನೆ, ನಾವು ಕಾಸು ಕೊಟ್ಟು ಜನರನ್ನ ತಂದಿಲ್ಲ’
ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ನಟ ದರ್ಶನ್ ಭಾಷಣ
ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ದರ್ಶನ್, ಮೈಯಲ್ಲಿರೋ ರಕ್ತದಲ್ಲಿ ನಿಮ್ಮ ಕಾಲು ತೊಳೆದ್ರೂ ಕಮ್ಮಿನೆ. ನಾವು ಕಾಸು ಕೊಟ್ಟು ಜನರನ್ನ ತಂದಿಲ್ಲ. ಅಂಬರೀಶ್ ಅಭಿಮಾನದ ಮೇಲೆ ಜನ ಬಂದಿದ್ದಾರೆ. ನಮ್ಮ ಬಗ್ಗೆ ಏನು ಮಾತನಾಡಿದ್ರೂ ಕೋಪ ಮಾಡ್ಕೊಳ್ಳೊಲ್ಲ. ನಾನು ಒಳ್ಳೆಯವನಾದರೆ ದೇವರು ಆಗ್ತೀನಿ. ಅಮ್ಮ ಇಲ್ಲಿಗೆ ಬಂದಿರೋದು.. ನಿಮ್ಮ ಪ್ರೀತಿಯ ಮೇಲೆ. ಮೇ 23ರಂದು ಟೀಕೆಗೆ ಮತದಾರರು ಉತ್ತರ ಕೊಡಬೇಕು ಎಂದು ತಮ್ಮನ್ನು ವೈಯಕ್ತಿಕವಾಗಿ ಟೀಕಿಸಿದವರಿಗೆ ದರ್ಶನ್ ಟಾಂಗ್ ಕೊಟ್ಟರು.