Asianet Suvarna News Asianet Suvarna News

ಶಿಥಿಲಾವಸ್ಥೆ ತಲುಪಿದ ಓವರ್‌ಹೆಡ್‌ ಟ್ಯಾಂಕ್‌: ಮಕ್ಕಳ ಜೀವಕ್ಕೆ ಬೆಲೆನೇ ಇಲ್ವಾ?

ಶಿಥಿಲಾವಸ್ಥೆ ತಲುಪಿದ ಓವರ್‌ಹೆಡ್‌ ಟ್ಯಾಂಕ್‌| ಯಾದಗಿರಿ ಜಿಲ್ಲೆಯ ಹೊನಗೇರಾ ಗ್ರಾಮದಲ್ಲಿರುವ ಓವರ್‌ಹೆಡ್‌ ಟ್ಯಾಂಕ್‌| ಅಪಾಯಕ್ಕೆ ಆಹ್ವಾನ ನೀಡುತ್ತಿರುವ ನೀರಿನ ಟ್ಯಾಂಕ್‌| ಓವರ್‌ಹೆಡ್‌ ಟ್ಯಾಂಕ್‌ ಯಾವಾಗ ಬೇಕಾದರೂ ಬೀಳಬಹುದು| 

ಯಾದಗಿರಿ(ಜ.29): ತಾಲೂಕಿನ ಹೊನಗೇರಾ ಗ್ರಾಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರಿಗೂ ಮನೆ ಬಿಟ್ಟು ಹೊರಗೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಹೌದು, ಈ ಗ್ರಾಮದಲ್ಲಿ ಓವರ್‌ಹೆಡ್‌ ಟ್ಯಾಂಕ್‌ ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ಈ ಓವರ್‌ಹೆಡ್‌ ಟ್ಯಾಂಕ್‌ ಯಾವಾಗ ಬೇಕಾದರೂ ಬೀಳಬಹುದು. 

ಟ್ಯಾಂಕ್‌ ಗ್ರಾಮದ ಶಾಲೆಯ ಪಕ್ಕದಲ್ಲಿಯೇ ಇರುವುದರಿಂದ ಮಕ್ಕಳು ಜೀವಭಯಯದಲ್ಲೇ ಪಾಠ, ಪ್ರವಚನ ಕೇಳಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಓವರ್‌ಹೆಡ್‌ ಟ್ಯಾಂಕ್‌ ಯಾವಾಗ ಬೇಕಾದರೂ ಬಿದ್ದು ಮಕ್ಕಳು ಪ್ರಾಣ ತೆಗೆದುಕೊಳ್ಳುವ ಸ್ಥಿತಿಯಲ್ಲಿದೆ. ಈ ಬಗ್ಗೆ ಸುವರ್ಣ ನ್ಯೂಸ್‌ ವಾಹಿನಿ ವರದಿಯನ್ನ ಬಿತ್ತರಿಸಿದೆ. ವರದಿಯ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.

ಇದನ್ನೂ ನೋಡಿ: Big3 Impact: ಟ್ಯಾಂಕ್‌ ನೆಲಸಮಕ್ಕೆ ಅಧಿಕಾರಿಗಳ ನಿರ್ಧಾರ

"