Asianet Suvarna News Asianet Suvarna News

ಅಂಗನವಾಡಿಗೆ ಸ್ಥಳ ನೀಡದಕ್ಕೆ ಯೋಧನ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ!

ಅಂಗನವಾಡಿಗೆ ಸ್ಥಳ ನೀಡದ್ದಕ್ಕೆ ಯೋಧನ ಕುಟುಂಬಕ್ಕೆ ಬಹಿಷ್ಕಾರ| ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ತೋಟಗಟ್ಟಿಯಲ್ಲಿ ನಡೆದ ಘಟನೆ| ಯೋಧ ವಿಠ್ಠಲ್ ಕಡಕೋಳ ಕುಟುಂಬಕ್ಕೆ ಮೂರು ವರ್ಷದಿಂದ ಬಹಿಷ್ಕಾರ ಹಾಕಿದ ಗ್ರಾಮಸ್ಥರು| 

ಬೆಳಗಾವಿ(ಫೆ.20): ಅಂಗನವಾಡಿಗೆ ಸ್ಥಳ ನೀಡದ್ದಕ್ಕೆ ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ತೋಟಗಟ್ಟಿಯಲ್ಲಿ ನಡೆದಿದೆ. ಯೋಧ ವಿಠ್ಠಲ್ ಕಡಕೋಳ ಕುಟುಂಬಕ್ಕೆ ಕಳೆದ ಮೂರು ವರ್ಷಗಳಿಂದ ಬಹಿಷ್ಕಾರ ಹಾಕಲಾಗಿದೆ. 

ಇದನ್ನೂ ಓದಿ: ಕಾಫಿ ತೋಟಕ್ಕೆ ಎಂಟ್ರಿ ಕೊಟ್ಟ 15 ಅಡಿ ಉದ್ದದ ಕಾಳಿಂಗ ಸರ್ಪ: ದಂಗಾದ ಜನ

ಈ ಸಂಬಂಧ ಯೋಧ ವಿಠ್ಠಲ್ ಕಡಕೋಳ 2017ರಲ್ಲೇ ಡಿಸಿ, ಎಸ್‌ಪಿ, ಪೊಲೀಸ್‌ ಕಮಿಷನರ್‌ಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ತಿಂಗಳು ಯೋಧ ಹಾಗೂ ಅವರ ಸಹೋದರನ ನಿಶ್ಚಿತಾರ್ಥ ನಡೆಯಲಿದೆ.ಇದೀಗ ಇಬ್ಬರ ನಿಶ್ಚಿತಾರ್ಥಕ್ಕೂ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. 

ಇದನ್ನೂ ಓದಿ: ಸುವರ್ಣ ನ್ಯೂಸ್‌ ವರದಿ ಬೆನ್ನಲ್ಲೇ ಅಧಿಕಾರಿಗಳು ಶೇಕ್‌ ಶೇಕ್‌!

"

 

Video Top Stories