ತಗಡಿನ ಶೆಡ್ನಲ್ಲಿ ಕೂಡಿ ಹಾಕಿದ ಗ್ರಾಮಸ್ಥರು: ಕಕ್ಕಾಬಿಕ್ಕಿಯಾದ ಬಿಜೆಪಿ ನಾಯಕ
ಅಥಣಿ(ನ.27): ಬಿಜೆಪಿ ಪರ ಪ್ರಚಾರಕ್ಕೆ ತೆರಳಿದ್ದ ಜಿ.ಪಂ ಸದಸ್ಯರೊಬ್ಬರನ್ನ ಗ್ರಾಮದ ಜನತೆ ಶೆಡ್ನಲ್ಲಿ ಕೂಡಿ ಹಾಕಿದ ಘಟನೆ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಪ್ರವಾಹ ಬಂದು ಮೂರು ತಿಂಗಳಾದ್ರೂ ಸರ್ಕಾರದಿಂದ ಇನ್ನೂ ಪರಿಹಾರ ಬಂದಿಲ್ಲ. ಇದೀಗ ಮತ ಕೇಳಲು ಬಂದಿದ್ದೀರಾ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಬಿಜೆಪಿ ಜಿ.ಪಂ ಸದಸ್ಯ ಸಿದ್ದಪ್ಪ ಮುದಕನ್ನವರ್ ಅವರನ್ನು ತಗಡಿನ ಶೆಡ್ ನಲ್ಲಿ ಕೂಡಿ ಹಾಕಿದ್ದಾರೆ. ಇದರಿಂದ ಕೆಲಕ್ಷಣ ತಬ್ಬಿಬ್ಬಾದ ಸಿದ್ದಪ್ಪ ಮುದಕನ್ನವರ್ ಶೆಡ್ನಲ್ಲಿಯೇ ಕುಳಿತೇ ತಹಶೀಲ್ದಾರ್ ಗೆ ಕರೆ ಮಾಡಿ ಸಮಸ್ಯೆ ಬಗೆ ಹರಿಸುವಂತೆ ಹೇಳಿದ್ದಾರೆ.
ಅಥಣಿ(ನ.27): ಬಿಜೆಪಿ ಪರ ಪ್ರಚಾರಕ್ಕೆ ತೆರಳಿದ್ದ ಜಿ.ಪಂ ಸದಸ್ಯರೊಬ್ಬರನ್ನ ಗ್ರಾಮದ ಜನತೆ ಶೆಡ್ನಲ್ಲಿ ಕೂಡಿ ಹಾಕಿದ ಘಟನೆ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಪ್ರವಾಹ ಬಂದು ಮೂರು ತಿಂಗಳಾದ್ರೂ ಸರ್ಕಾರದಿಂದ ಇನ್ನೂ ಪರಿಹಾರ ಬಂದಿಲ್ಲ. ಇದೀಗ ಮತ ಕೇಳಲು ಬಂದಿದ್ದೀರಾ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಬಿಜೆಪಿ ಜಿ.ಪಂ ಸದಸ್ಯ ಸಿದ್ದಪ್ಪ ಮುದಕನ್ನವರ್ ಅವರನ್ನು ತಗಡಿನ ಶೆಡ್ ನಲ್ಲಿ ಕೂಡಿ ಹಾಕಿದ್ದಾರೆ. ಇದರಿಂದ ಕೆಲಕ್ಷಣ ತಬ್ಬಿಬ್ಬಾದ ಸಿದ್ದಪ್ಪ ಮುದಕನ್ನವರ್ ಶೆಡ್ನಲ್ಲಿಯೇ ಕುಳಿತೇ ತಹಶೀಲ್ದಾರ್ ಗೆ ಕರೆ ಮಾಡಿ ಸಮಸ್ಯೆ ಬಗೆ ಹರಿಸುವಂತೆ ಹೇಳಿದ್ದಾರೆ.