Asianet Suvarna News Asianet Suvarna News

5ನೇ ಆವೃತ್ತಿಯ ವಾಸವಿ ಎಕ್ಸಲೆನ್ಸ್ ಅವಾರ್ಡ್..! ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ

ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ 5ನೇ ವಾಸವಿ ಅವಾರ್ಡ್ಸ್ ಆಫ್ ಎಕ್ಸೆಲೆನ್ಸ್ 2024 ಕಾರ್ಯಕ್ರಮ ಆಯೋಜಿಸಲಾಗಿತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಸಹಯೋಗದಿಂದ ಟೌನ್‌ಹಾಲ್‌ನಲ್ಲಿ ಅದ್ದೂರಿ ಕಾರ್ಯಕ್ರಮ ಜರುಗಿತು. 

First Published Jul 15, 2024, 12:01 PM IST | Last Updated Jul 15, 2024, 12:01 PM IST

ಆರ್ಯವೈಶ್ಯ ಮಹಾಸಭಾ (Arya Vaishya Mahasabha) ವತಿಯಿಂದ ಸಾಧಕರನ್ನ ಗುರುತಿಸಿ ಪ್ರಶಸ್ತಿ ನೀಡಲಾಯ್ತು. ಟೌನ್‌ಹಾಲ್‌ನಲ್ಲಿ 5ನೇ ವಾಸವಿ ಅವಾರ್ಡ್ಸ್ ಆಫ್ ಎಕ್ಸೆಲೆನ್ಸ್ 2024 (Vasavi Awards of Excellence 2024) ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಎನ್ ಅಶ್ವತ್ಥ್ ನಾರಾಯಣ್, ಎಂಎಲ್ಸಿ ಡಿ.ಎಸ್ ಅರುಣ್, ಏಷ್ಯಾನೆಟ್ ಸುವರ್ಣನ್ಯೂಸ್ ಸಂಪಾದಕರಾದ ಅಜಿತ್ ಹನಮಕ್ಕನವರ್, ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಸಾಧಕರನ್ನ ಗುರುತಿಸಿ ಪ್ರತಿ ವರ್ಷ ಸನ್ಮಾನಿಸುವುದಕ್ಕೆ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಬಹಳ ಹೆಮ್ಮೆಪಡುತ್ತಿದೆ ಅಂತ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ ರವಿಶಂಕರ್ ಹೇಳಿದ್ರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 16 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಕೃಷಿ, ವಾಣಿಜ್ಯ, ಕೈಗಾರಿಕೆ, ಶಿಕ್ಷಣ, ಸಹಕಾರ, ಸಾಹಿತ್ಯ, ಸಮಾಜ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ನೀಡಲಾಯ್ತು. ಜೀವಮಾನದ ಸಾಧನೆಗೆ ಎಂ.ಆರ್ ಜೈಶಂಕರ್ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಸಾಧಕರನ್ನ ಗುರುತಿಸಿ ಸನ್ಮಾನಿಸಲಾಯ್ತು. ಹಲವು ಗಣ್ಯರು ಭಾಗಿಯಾಗಿದ್ದ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು. 

ಇದನ್ನೂ ವೀಕ್ಷಿಸಿ:  ಮತ್ತೆ ಮೋಡಿ ಮಾಡುತ್ತಾರಾ ರಂಗಾಯಣ ರಘು, ದುನಿಯಾ ವಿಜಯ್ ? ಭೀಮನ ಖದರ್ ಹೆಚ್ಚಿಸಿದ ಇಬ್ಬರು ನಟರ ಕಾಂಬೋ!