Asianet Suvarna News Asianet Suvarna News

ಪಾರಿವಾಳ ಹಿಡಿಯೋ ಭರದಲ್ಲಿ ದುರಂತ: ಹೈಟೆನ್ಷನ್ ತಂತಿ ತಗುಲಿ ಇಬ್ಬರು ಬಾಲಕರ ಸ್ಥಿತಿ ಚಿಂತಾಜನಕ

ಬೆಂಗಳೂರಿನ ನಂದಿನಿ ಲೇಔಟ್‌'ನ ವಿಜಯಾನಂದ ನಗರದಲ್ಲಿ ಹೈಟೆನ್ಷನ್ ತಂತಿ ತಗುಲಿ ಇಬ್ಬರು ಬಾಲಕರ ಸ್ಥಿತಿ ಚಿಂತಾಜನಕವಾಗಿದೆ.

ಪಾರಿವಾಳ ಹಿಡಿಯೋ ಭರದಲ್ಲಿ ಹೈಟೆನ್ಷನ್ ತಂತಿ ತಗುಲಿ ಇಬ್ಬರು ಬಾಲಕರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 10ವರ್ಷದ ಚಂದ್ರು ಹಾಗೂ 12 ವರ್ಷದ ಸುಪ್ರೀತ್‌ ಸ್ಥಿತಿ ಗಂಭೀರವಾಗಿದೆ.  ಪಾರಿವಾಳ ಹಿಡಿಯಲು ಕಬ್ಬಿಣದ ಸರಳು ಬಳಸಿದ್ದರಿಂದ ಕರೆಂಟ್‌ ಶಾಕ್‌ ಹೊಡೆದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ. ಇನ್ನು ಆಸ್ಪತ್ರೆಗೆ ಸಚಿವ ಗೋಪಾಲಯ್ಯ ಭೇಟಿ ನೀಡಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ. ಸುಪ್ರೀತ್‌ ಸ್ಥಿತಿ ಕಂಡು ತಾಯಿ ಪ್ರೇಮಾ, ನನ್ನ ಮಗ ಅನ್ನುವುದು ಗೊತ್ತಾಗುತ್ತಿಲ್ಲ ಅಷ್ಟು ಸುಟ್ಟು ಹೋಗಿದ್ದಾನೆ ಎಂದು ಕಣ್ಣೀರಾಕುತ್ತಿದ್ದಾರೆ.

Shivamogga: ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು