Asianet Suvarna News Asianet Suvarna News

ರಾಜ್ಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ ಮೂಲದ ಮಂಗಳಮುಖಿಯರ ಹೈಡ್ರಾಮಾ!

ಹೆದ್ದಾರಿ ಮಧ್ಯೆ ಮಹಾರಾಷ್ಟ್ರ ಮೂಲದ ಮಂಗಳಮುಖಿಯರ ಹೈಡ್ರಾಮಾದ ವಿಡಿಯೋ ಈಗ  ವೈರಲ್ ಆಗಿದೆ. ಬಾಗಲಕೋಟೆ ಜಮಖಂಡಿಯ ಮೂಧೋಳ ರಾಜ್ಯ  ಹೆದ್ದಾರಿಯಲ್ಲಿ RTO ಕಚೇರಿ ಬಳಿ, ವಾಹನ ಸಾರಿಗೆ ಇಲಾಖೆಯವರು ಮಂಗಳಮುಖಿಯರು ತೆರಳುತ್ತಿದ್ದ ವಾಹನ ವಶಕ್ಕೆ ಪಡೆದಿದ್ದರು. ಈ ವೇಳೆ ಮಂಗಳಮುಖಿಯರು ವಾಹನಕ್ಕೆ ಅಡ್ಡ ಮಲಗಿ, ಕೈಯಲ್ಲಿನ ಬಳೆ ಒಡೆದುಕೊಂಡು ಹೈಡ್ರಾಮಾ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೇ ತಪಾಸಣೆಗಿಳಿದಿದ್ದ RTO ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದಿಂದ ಸವದತ್ತಿಗೆ ಮ್ಯಾಕ್ಸಿ ಕ್ಯಾಬ್ ನಲ್ಲಿ 7 ಜನರು ಪ್ರಯಾಣಿಸುವ ಬದಲು 12 ಜನ ತೆರಳುತ್ತಿದ್ದರು.  ಅದರೆ ಇದನ್ನು ಗಮನಿಸಿದ RTO ಅಧಿಕಾರಿಗಳು ಮ್ಯಾಕ್ಸ್ ಕ್ಯಾಬ್ ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಂಗಳಮುಖಿಯರು ಹೈಡ್ರಾಮಾ ಆರಂಭಿಸಿದ್ದು, ಹಿನ್ನೆಲೆ ರಸ್ತೆ ಸಂಚಾರ ಅಸ್ತವ್ಯಸ್ತವಗೊಮಡಿದೆ. ಬಳಿಕ ಸ್ಥಳಕ್ಕೆ ಪೋಲಿಸರು ಆಗಮಿಸಿ ಮಂಗಳಮುಖಿಯರ ಡ್ರಾಮಾಗೆ ತೆರೆ ಎಳೆದಿದ್ದಾರೆ.

ಬಾಗಲಕೋಟೆ[ಜೂ.15]: ಹೆದ್ದಾರಿ ಮಧ್ಯೆ ಮಹಾರಾಷ್ಟ್ರ ಮೂಲದ ಮಂಗಳಮುಖಿಯರ ಹೈಡ್ರಾಮಾದ ವಿಡಿಯೋ ಈಗ  ವೈರಲ್ ಆಗಿದೆ. 

ಬಾಗಲಕೋಟೆ ಜಮಖಂಡಿಯ ಮೂಧೋಳ ರಾಜ್ಯ  ಹೆದ್ದಾರಿಯಲ್ಲಿ RTO ಕಚೇರಿ ಬಳಿ, ವಾಹನ ಸಾರಿಗೆ ಇಲಾಖೆಯವರು ಮಂಗಳಮುಖಿಯರು ತೆರಳುತ್ತಿದ್ದ ವಾಹನ ವಶಕ್ಕೆ ಪಡೆದಿದ್ದರು. ಈ ವೇಳೆ ಮಂಗಳಮುಖಿಯರು ವಾಹನಕ್ಕೆ ಅಡ್ಡ ಮಲಗಿ, ಕೈಯಲ್ಲಿನ ಬಳೆ ಒಡೆದುಕೊಂಡು ಹೈಡ್ರಾಮಾ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೇ ತಪಾಸಣೆಗಿಳಿದಿದ್ದ RTO ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದಿಂದ ಸವದತ್ತಿಗೆ ಮ್ಯಾಕ್ಸಿ ಕ್ಯಾಬ್ ನಲ್ಲಿ 7 ಜನರು ಪ್ರಯಾಣಿಸುವ ಬದಲು 12 ಜನ ತೆರಳುತ್ತಿದ್ದರು.  ಅದರೆ ಇದನ್ನು ಗಮನಿಸಿದ RTO ಅಧಿಕಾರಿಗಳು ಮ್ಯಾಕ್ಸ್ ಕ್ಯಾಬ್ ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಂಗಳಮುಖಿಯರು ಹೈಡ್ರಾಮಾ ಆರಂಭಿಸಿದ್ದು, ಹಿನ್ನೆಲೆ ರಸ್ತೆ ಸಂಚಾರ ಅಸ್ತವ್ಯಸ್ತವಗೊಮಡಿದೆ. ಬಳಿಕ ಸ್ಥಳಕ್ಕೆ ಪೋಲಿಸರು ಆಗಮಿಸಿ ಮಂಗಳಮುಖಿಯರ ಡ್ರಾಮಾಗೆ ತೆರೆ ಎಳೆದಿದ್ದಾರೆ.

Video Top Stories