ಗಲಾಟೆ ಮಾಡಿದ್ದಕ್ಕೆ ಮಕ್ಕಳಿಗೆ ಬೂಟಿನಿಂದ ಹೊಡೆದು ಕ್ರೌರ್ಯ ಮೆರೆದ ಶಿಕ್ಷಕ
ಗಲಾಟೆ ಮಾಡಿದ್ದಕ್ಕೆ ಮಕ್ಕಳಿಗೆ ಬೂಟಿನಿಂದ ಹೊಡೆದ ಶಿಕ್ಷಕ| ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಘಟನೆ| ಶಾಲೆಯ ಮುಖ್ಯಾಧ್ಯಾಪಕನ ವಿರುದ್ಧ ಪೋಷಕರ ಆಕ್ರೋಶ| ಮುಖ್ಯಾಧ್ಯಾಪಕನ ವಿರುದ್ಧ ಕ್ರಮಕ್ಕೆ ಪೋಷಕ ಆಗ್ರಹ|
ಬೆಳಗಾವಿ(ಜ.30): ಗಲಾಟೆ ಮಾಡಿದರೆಂದು ಮುಖ್ಯಾಧ್ಯಾಪಕನೊಬ್ಬ ಮಕ್ಕಳಿಗೆ ಬೂಟಿನಿಂದ ಹೊಡೆದ ಘಟನೆ ಜಿಲ್ಲೆಯ ಗೋಕಾಕ ನಗರದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ. ಗಲಾಟೆ ಮಾಡಿದ್ದಕ್ಕೆ ಮುಖ್ಯಾಧ್ಯಾಪಕ ಸಂದೀಪ ಅನಿಗೋಳ 6 ನೇ ತರಗತಿ ಮಕ್ಕಳಿಗೆ ಬೂಟಿನೇಟು ಕೊಟ್ಟು ಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದಾನೆ.
ಗಲಾಟೆ ಮಾಡಿದ್ದಾರೆ ಎಂಬ ವಿಷಯವನ್ನೇ ನೆಪವಾಗಿಟ್ಟುಕೊಂಡು 13 ಮಕ್ಕಳಿಗೆ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಶಾಲೆಯ ಮುಖ್ಯಾಧ್ಯಾಪಕನ ವಿರುದ್ಧ ಪೋಷಕರು ಆಕ್ರೋಶ ಪಡಿಸಿದ್ದಾರೆ. ಮುಖ್ಯಾಧ್ಯಾಪಕನ ವಿರುದ್ಧ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ.