ಸುವರ್ಣ ನ್ಯೂಸ್ಗೆ ಸುದ್ದಿ ಕೊಟ್ಟವರಿಗೆ ಧಮ್ಕಿ ಹಾಕಿದ ತಹಶೀಲ್ದಾರ್: ಸಿಎಂ ಆದೇಶಕ್ಕೂ ಡೋಂಟ್ಕೇರ್..!
ಸಿಎಂ ಆದೇಶ ಕೊಟ್ಟಿದ್ದೆ ಒಂದು, ಅಧಿಕಾರಿ ಮಾಡಿದ್ದೇ ಮತ್ತೊಂದು| ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದ ಘಟನೆ| ಸಿಎಂ ಆದೇಶಕ್ಕೂ ಕಿಮ್ಮತ್ತು ಕೊಡದ ತಹಶೀಲ್ದಾರ್| ಸುವರ್ಣ ನ್ಯೂಸ್ಗೆ ಸುದ್ದಿ ಕೊಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದಾದ ಅಧಿಕಾರಿ|
ಬೆಳಗಾವಿ(ಆ.23): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಕೊಟ್ಟಿದ್ದೆ ಒಂದು, ಅಧಿಕಾರಿ ಮತ್ತೊಂದು ಮಾಡಿದ ಘಟನೆ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ. ತಾಲೂಕಿನಲ್ಲಿ ಪ್ರವಾಹದಿಂದ ಜನರು ಅನುಭವಿಸುತ್ತಿದ್ದ ಕಷ್ಟಗಳ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು. ವರದಿ ಬಳಿಕ ಸ್ವತಃ ಸಿಎಂ ಜಿಲ್ಲಾಧಿಕಾರಿಗೆ ಕರೆ ಮಾಡಿ ತಕ್ಷಣ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದ್ದರು.
ಸುವರ್ಣ ನ್ಯೂಸ್ ವರದಿಗೆ ಸ್ಪಂದಿಸಿದ ಸಿಎಂ: ಗ್ರಾಮಸ್ಥರಿಗೆ ತಕ್ಷಣ ಬೋಟ್ ವ್ಯವಸ್ಥೆ ಮಾಡಲು ಸೂಚನೆ
ಆದರೆ, ಸಿಎಂ ಆದೇಶಕ್ಕೂ ಕಿಮ್ಮತ್ತು ಕೊಡದ ತಹಶೀಲ್ದಾರ್ ಸುವರ್ಣ ನ್ಯೂಸ್ಗೆ ಸುದ್ದಿ ಕೊಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದಾಗಿದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ತಹಶೀಲ್ದಾರ್ ಸಿಎಂ ಆದೇಶಕ್ಕೂ ಕೂಡ ಡೋಂಟ್ ಕೇರ್ ಅಂದಿದ್ದಾರೆ.