Asianet Suvarna News Asianet Suvarna News

ಹುಕ್ಕೇರಿ ಗೆಲುವಿಗಾಗಿ ಚಪ್ಪಲಿ ಬಿಟ್ಟ ಅಭಿಮಾನಿ..

ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಒಂದು ಕಡೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರು ಜಯ ನಮ್ಮದೇ ಆಗಲಿ ಎಂದು ಗುಡಿ ಗುಂಡಾರಗಳನ್ನ ಸುತ್ತಿ ಹರಕೆ ಹೊರುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಗೆಲುವಿಗಾಗಿ ವ್ಯಕ್ತಿಯೋರ್ವ ಚಪ್ಪಲಿ ಹಾಕುವದನ್ನ ಬಿಟ್ಟು ಪ್ರಕಾಶ ಹುಕ್ಕೇರಿ ಗೆದ್ದ ಮೇಲೆಯೇ ಚಪ್ಪಲಿ ಹಾಕುತ್ತೇನೆ ಎಂದು ಹರಕೆ ಹೊತ್ತಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಭೀಮಗೌಡ ಬಸಗೌಡ ಅಮ್ಮಣಗಿ ಎಂಬ ವ್ಯಕ್ತಿ ಪ್ರಕಾಶ ಹುಕ್ಕೇರಿ ಗೆಲುವಿಗಾಗಿ ಅಕ್ಕಿವಾಟ ಮಲ್ಲಯ್ಯ( ಈಶ್ವರ ) ಹರಕೆ ಹೊತ್ತಿದ್ದಾನೆ. ಚುನಾವಣಾ ಮುಗಿದ ದಿನದಿಂದಲೇ ಭೀಮಗೌಡ ಪಾಟೀಲ ಹರಕೆ ಹೊತ್ತಿದ್ದು ಬಿರು ಬಿಸಲಲ್ಲೂ ಚಪ್ಪಲಿ ಇಲ್ಲದೇ ಅಲೆದಾಡುತ್ತಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲೂ ಇವರು ಪ್ರಕಾಶ ಹುಕ್ಕೇರಿ ಅವರ ಗೆಲುವಿಗಾಗಿ ಹೀಗೆ ಹರಕೆ ಹೊತ್ತಿದ್ದರು. ಪ್ರಕಾಶ ಹುಕ್ಕೇರಿ ಅವರ ಗೆಲವು ಕೂಡ ಆಗಿತ್ತು. ಈಗ ಮತ್ತೆ ಹರಕೆ ಹೊತ್ತಿದ್ದು ಅಕ್ಕಿವಾಟ ಮಲ್ಲಯ್ಯ ಮತ್ತೆ ಪ್ರಕಾಶ ಹುಕ್ಕೇರಿ ಅವರನ್ನ ಗೆಲ್ಲಿಸುತ್ತಾನೆ ಎನ್ನುವ ವಿಶ್ವಾಸ ಭೀಮಗೌಡ ಅವರದ್ದಾಗಿದೆ.

ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಒಂದು ಕಡೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರು ಜಯ ನಮ್ಮದೇ ಆಗಲಿ ಎಂದು ಗುಡಿ ಗುಂಡಾರಗಳನ್ನ ಸುತ್ತಿ ಹರಕೆ ಹೊರುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಗೆಲುವಿಗಾಗಿ ವ್ಯಕ್ತಿಯೋರ್ವ ಚಪ್ಪಲಿ ಹಾಕುವದನ್ನ ಬಿಟ್ಟು ಪ್ರಕಾಶ ಹುಕ್ಕೇರಿ ಗೆದ್ದ ಮೇಲೆಯೇ ಚಪ್ಪಲಿ ಹಾಕುತ್ತೇನೆ ಎಂದು ಹರಕೆ ಹೊತ್ತಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಭೀಮಗೌಡ ಬಸಗೌಡ ಅಮ್ಮಣಗಿ ಎಂಬ ವ್ಯಕ್ತಿ ಪ್ರಕಾಶ ಹುಕ್ಕೇರಿ ಗೆಲುವಿಗಾಗಿ ಅಕ್ಕಿವಾಟ ಮಲ್ಲಯ್ಯ( ಈಶ್ವರ ) ಹರಕೆ ಹೊತ್ತಿದ್ದಾನೆ. ಚುನಾವಣಾ ಮುಗಿದ ದಿನದಿಂದಲೇ ಭೀಮಗೌಡ ಪಾಟೀಲ ಹರಕೆ ಹೊತ್ತಿದ್ದು ಬಿರು ಬಿಸಲಲ್ಲೂ ಚಪ್ಪಲಿ ಇಲ್ಲದೇ ಅಲೆದಾಡುತ್ತಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲೂ ಇವರು ಪ್ರಕಾಶ ಹುಕ್ಕೇರಿ ಅವರ ಗೆಲುವಿಗಾಗಿ ಹೀಗೆ ಹರಕೆ ಹೊತ್ತಿದ್ದರು. ಪ್ರಕಾಶ ಹುಕ್ಕೇರಿ ಅವರ ಗೆಲವು ಕೂಡ ಆಗಿತ್ತು. ಈಗ ಮತ್ತೆ ಹರಕೆ ಹೊತ್ತಿದ್ದು ಅಕ್ಕಿವಾಟ ಮಲ್ಲಯ್ಯ ಮತ್ತೆ ಪ್ರಕಾಶ ಹುಕ್ಕೇರಿ ಅವರನ್ನ ಗೆಲ್ಲಿಸುತ್ತಾನೆ ಎನ್ನುವ ವಿಶ್ವಾಸ ಭೀಮಗೌಡ ಅವರದ್ದಾಗಿದೆ.